ಸುದ್ದಿಗೋಷ್ಠಿಯಲ್ಲಿ ಮಾತನಾಡಿದಸ್ವದೇಶಿ ಮೇಳದ ಸಂಚಾಲಕ ಪ್ರಕಾಶ್ ಬೆಳವಾಡಿ, ‘ಜನರಲ್ಲಿ ಸ್ವದೇಶಿ ಭಾವ ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಅಪಾಯದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ 1991ರಲ್ಲಿ ಸ್ವದೇಶಿ ಜಾಗರಣ ಮಂಚ್ ಸ್ಥಾಪನೆಗೊಂಡಿತು. ಇದು ಸ್ವದೇಶಿ ವಸ್ತುಗಳ ಪರಿಚಯ, ಸಾವಯವ ಸಂತೆ, ಸ್ವಯಂ ಉದ್ಯೋಗ ತರಬೇತಿ, ಆಯುರ್ವೇದ ಶಿಬಿರ ಹಾಗೂ ಸ್ವದೇಶಿ ಮೇಳದಂತಹ ಹಲವಾರು ರಚನಾತ್ಮಕ ಕೆಲಸಗಳನ್ನು ಮಾಡಿಕೊಂಡು ಬಂದಿದೆ’ ಎಂದು ತಿಳಿಸಿದರು.