‘ನಾಗವಾರ ಹೋಬಳಿಯಲ್ಲಿನ ಆ 13.1 ಗುಂಟೆಯ ಜತೆಗೆ ಚೆಂಗಪ್ಪ ಮತ್ತು ಕಮಲ್ ಪಾಶಾ ಎಂಬುವವರು 100 ಸರ್ವೆ ನಂಬರ್ಗಳನ್ನು ಉಲ್ಲೇಖಿಸಿ 25,000 ಚದರ ಅಡಿ ಜಮೀನನ್ನು ಧವಳಗಿರಿ ಡೆವಲಪರ್ಸ್ಗೆ ಮಾರಿದ್ದರು. ಒಂದೇ ಕ್ರಯಪತ್ರದಲ್ಲಿ ಈ ವಹಿವಾಟು ನಡೆದಿದೆ. ವಾಸ್ತವದಲ್ಲಿ 100 ಸರ್ವೆ ನಂಬರ್ಗಳಲ್ಲಿ ಈ ಜಮೀನು ಇರಲೇ ಇಲ್ಲ. ಆದರೆ, ಈ ಎಲ್ಲವನ್ನೂ ಮೆಟ್ರೊ ಯೋಜನೆಗೆ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂಬಂತೆ ದಾಖಲೆ ಸೃಷ್ಟಿಸಿ, ಧವಳಗಿರಿ ಡೆವಲಪರ್ಸ್ ₹ 22.92 ಕೋಟಿ ಪರಿಹಾರ ಪಡೆದಿದೆ’ ಎಂದು ಆರೋಪಿಸಿದ್ದಾರೆ.