ಕಳೆದ ಮಳೆಗಾಲದಲ್ಲಿ ಜಿಲ್ಲೆಯ ವಿವಿಧೆಡೆ ಏಳೆಂಟು ಬಾರಿ ಇದೇ ರೀತಿ ಲಘು ಭೂಕಂಪನವಾಗಿತ್ತು. ಆ ಸಂದರ್ಭದಲ್ಲಿ ಜಿಲ್ಲೆಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದ ತಜ್ಞರು, ಮಳೆ ಹೆಚ್ಚಾದಾಗ ಹಾಗೂ ಆಲಮಟ್ಟಿ ಜಲಾಶಯ ಭರ್ತಿಯಾದಾಗ ಈ ರೀತಿಯ ಲಘು ಭೂಕಂಪವಾಗುವುದು ಸಹಜ. ಇದಕ್ಕೆ ಜನರು ಭಯಪಡುವ ಅಗತ್ಯವಿಲ್ಲ ಎಂದು ಧೈರ್ಯತುಂಬಿದ್ದರು.