‘ನಾನೂ ವಿದ್ಯಾರ್ಥಿಯಾಗಿದ್ದಾಗ ತರಗತಿಗಳಲ್ಲಿ ಎಂದೂ ಮುಂದೆ ಕೂರಲಿಲ್ಲ.ಯುವಿಸಿಇಯಲ್ಲಿ ಓದಬೇಕೆಂಬಆಸೆ ಇತ್ತು. ಸೀಟು ಸಿಗದ ಕಾರಣ ನಮ್ಮೂರ ಎಂಜಿನಿಯರಿಂಗ್ ಕಾಲೇಜು ಸೇರಿದೆ. ಓದಿನ ಹೊರತಾದ ಅನುಭವಗಳಾಗಿದ್ದು ಹಿಂದಿನ ಬೆಂಚ್ನಿಂದಾಗಿ. ಹಾಗಂತ ಜೀವನ ಪಾಠ ಎದುರಾದಾಗ ಹಿಂದೆ ಉಳಿಯಲಿಲ್ಲ. ಹಣೆಬರಹ ಶಪಿಸುತ್ತಾ ಕೂರಲಿಲ್ಲ. ಹಣೆಬರಹ ಯಾರೂ ಬರೆಯುವುದಿಲ್ಲ. ಕೈಗೆರೆಗಳು ಸವೆಯಬೇಕು. ಅಂದರೆ, ಸತತ ಪರಿಶ್ರಮ, ಜ್ಞಾನದ ಮೂಲಕ ಉನ್ನತ ಸಾಧನೆ ಮಾಡಬೇಕು. ಅಂತಹ ಸಾಧಕರಲ್ಲಿ ವಿಶ್ವೇಶ್ವರಯ್ಯ ಮಾದರಿ’ ಎಂದರು. ‘ಹಿಂದೆ ಭೂಮಿ, ಬಂಡವಾಳ ಇದ್ದವರಿಗೆ ಸ್ಥಾನಮಾನ ಸಿಗುತ್ತಿತ್ತು. ಇಂದು ಜ್ಞಾನಕ್ಕೆ ಆ ಸ್ಥಾನವಿದೆ. ಅಂತಹ ಅವಕಾಶಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು. ಗೂಗಲ್, ತಂತ್ರಜ್ಞಾನ ಎಷ್ಟೇ ಲಭ್ಯ ಇದ್ದರೂ, ಮೂಲ ಜ್ಞಾನವೂ ಅಷ್ಟೇ ಮುಖ್ಯ’ ಎಂದರು.