ಎಸ್ಸಿ ಮತ್ತು ಎಸ್ಟಿಗಳ ಬೇಡಿಕೆ ಬಹಳ ವರ್ಷಗಳಿಂದ ಇತ್ತು. ಇದಕ್ಕೆ ಆಯೋಗ ಮತ್ತು ಸಮಿತಿಯನ್ನು ರಚಿಸಲಾಗಿತ್ತು. ಅವುಗಳ ಶಿಫಾರಸ್ಸಿನಂತೆ ನಡೆದುಕೊಂಡಿದ್ದೇವೆ. ನಾನೀಗ ಯಾವುದೇ ಒಂದು ಜಾತಿ ಅಥವಾ ಸಮುದಾಯದ ನಾಯಕನಲ್ಲ. ಎಲ್ಲ ಸಮುದಾಯವನ್ನು ಒಂದೇ ರೀತಿ ನೋಡಿಕೊಳ್ಳಬೇಕು. ಬೊಮ್ಮಾಯಿ ಅವರು ಲಿಂಗಾಯತ, ಆದರೂ ಅವರು ಎಸ್ಸಿ ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಿದ್ದಾರೆ ಎಂದು ಅವರು ಹೇಳಿದರು.