ಯುವರಾಜ್ ಸ್ವಾಮಿಯ ಮೂಲ ಹೆಸರು ರಮೇಶ್. ಬಿಎಸ್ಸಿ ಪದವೀಧರನಾಗಿರುವ ಈತ, ಚಿತ್ರದುರ್ಗದ ಪ್ರಭಾವಿ ಮಠ ಸೇರಿದ್ದ. ಬಸವತತ್ವ ಅಧ್ಯಯನಕ್ಕೆ ಮಠದಲ್ಲಿದ್ದ ನೂರಾರು ವಟುಗಳಲ್ಲಿ ರಮೇಶ್ ವಿದ್ಯಾವಂತನಾಗಿದ್ದ. ಅನ್ಯಜಾತಿಯವರಲ್ಲಿ ದೀಕ್ಷೆ ಪಡೆದ ಎರಡನೇ ವ್ಯಕ್ತಿ ಈತನಾಗಿದ್ದ. ಅಂದಿನಿಂದ ಸಂಗನ ಬಸವ ಸ್ವಾಮೀಜಿ ಎಂದು ಕರೆಯಲಾಗುತ್ತಿತ್ತು.