<p>ಮಳೆ ದೇವರು, ಮೂಲ ನಿವಾಸಿಗಳ ಕುಲದೇವರೂ ಆಗಿರುವ ಇಗ್ಗುತಪ್ಪ ದೇವರ `ಕಲಾಡ್ಜ ಹಬ್ಬ'ದ ಸಂಭ್ರಮದಲ್ಲಿ ಇಂದು ಕೊಡಗು ತೇಲಾಡುತ್ತಿದೆ. ಕುಂಭ ಮಾಸದಲ್ಲಿ ನಡೆಯುವ ಈ ಹಬ್ಬದಲ್ಲಿ ತುಲಾಭಾರದ ವಿಶೇಷತೆ. ಇಂದು ಇಗ್ಗುತಪ್ಪದೇವರ ಉತ್ಸವ ಮೂರ್ತಿಯೊಂದಿಗೆ ಐದು ಕಿ.ಮೀ ದೂರದ ನೆಲಜಿಇಗ್ಗುತಪ್ಪ ದೇವಸ್ಥಾನದ ಮೂಲಕ ಮಲ್ಮ ಬೆಟ್ಟಕ್ಕೆ ತೆರಳಿ ಪೂಜೆ ಮಾಡುತ್ತಾರೆ.<br /> <br /> ಈ ಉತ್ಸವಕ್ಕೂ ಐತಿಹಾಸಿಕ ಹಿನ್ನೆಲೆ ಇದೆ. ಕೇರಳದಲ್ಲಿ ಶಂಖ ಒಂದರಿಂದ ಆರು ಗಂಡು ಹಾಗೂ ಒಂದು ಹೆಣ್ಣಿನ ಜನನವಾಯಿತು. ಅವರಲ್ಲಿ ನಾಲ್ಕನೆಯವ ಇಗ್ಗುತಪ್ಪ. ವರವೊಂದರ ಪರಿಣಾಮ ಕೊಡಗಿನ ಪಾಡಿಯ ಕ್ಷೇತ್ರದಲ್ಲಿ ಈತ ನೆಲೆ ನಿಂತ. ಅಂದಿನಿಂದ ಊರಿನ ಜನಕ್ಕೆಲ್ಲ ಒಳ್ಳೆಯದಾಯಿತು. ಈ ಹಿನ್ನೆಲೆಯಲ್ಲಿ ಇಗ್ಗುತಪ್ಪ ನೆಲೆ ನಿಂತ ನೆನಪಿಗಾಗಿ ಧಾನ್ಯ ಲಕ್ಷಿಯ ಪೂಜೆಯ ರೂಪದಲ್ಲಿ ಹುತ್ತರಿ ಹಬ್ಬ ಆಚರಿಸಲಾಗುತ್ತಿದೆ ಎನ್ನುವುದು ಪ್ರತೀತಿ.<br /> <br /> ಇಗ್ಗುತಪ್ಪ ದೇವರ ದೇವಸ್ಥಾನದಲ್ಲಿ ಕೊಡವರು ಮಗುವಿನ ನಾಮಕರಣವನ್ನು ಹೆಚ್ಚಾಗಿ ಮಾಡುತ್ತಾರೆ. ವರ್ಷದ 11 ತಿಂಗಳೂ(ಕರ್ಕಾಟಕ ಮಾಸ ಬಿಟ್ಟು) ತುಲಾಭಾರ ನಡೆಯುತ್ತದೆ. ಈ ದೇವಸ್ಥಾನದ ಗರ್ಭಗುಡಿಯನ್ನು ಕೆಲ ವರ್ಷದ ಹಿಂದೆ ಸರ್ಕಾರ ನವೀಕರಣಗೊಳಿಸಿದೆ. ಇದೀಗ ಇಗ್ಗುತಪ್ಪ ಭಕ್ತಜನ ಮಂಡಳಿಯವರು ದೇವಸ್ಥಾನದ ಹಳೆಯ ಕಟ್ಟಡಗಳನ್ನು ಕೆಡವಿ ಆಧುನೀಕರಣ ಮಾಡುತ್ತಿದ್ದಾರೆ. ಇದು ಈ ಬಾರಿಯ ಉತ್ಸವಕ್ಕೆ ಇನ್ನಷ್ಟು ಮೆರಗು ನೀಡಿದೆ. ಅದೇ ರೀತಿ ಸಮೀಪದಲ್ಲಿಯೇ ಇರುವ ನೆಲಜಿಯಲ್ಲಿನ ಇಗ್ಗುತಪ್ಪ ದೇವಸ್ಥಾನದಲ್ಲಯೂ ಬ್ರಹ್ಮ ಕಲಶೋತ್ಸವ ನಡೆಯಲಿದೆ. ಸಂಪರ್ಕಕ್ಕೆ: 9480449290<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಳೆ ದೇವರು, ಮೂಲ ನಿವಾಸಿಗಳ ಕುಲದೇವರೂ ಆಗಿರುವ ಇಗ್ಗುತಪ್ಪ ದೇವರ `ಕಲಾಡ್ಜ ಹಬ್ಬ'ದ ಸಂಭ್ರಮದಲ್ಲಿ ಇಂದು ಕೊಡಗು ತೇಲಾಡುತ್ತಿದೆ. ಕುಂಭ ಮಾಸದಲ್ಲಿ ನಡೆಯುವ ಈ ಹಬ್ಬದಲ್ಲಿ ತುಲಾಭಾರದ ವಿಶೇಷತೆ. ಇಂದು ಇಗ್ಗುತಪ್ಪದೇವರ ಉತ್ಸವ ಮೂರ್ತಿಯೊಂದಿಗೆ ಐದು ಕಿ.ಮೀ ದೂರದ ನೆಲಜಿಇಗ್ಗುತಪ್ಪ ದೇವಸ್ಥಾನದ ಮೂಲಕ ಮಲ್ಮ ಬೆಟ್ಟಕ್ಕೆ ತೆರಳಿ ಪೂಜೆ ಮಾಡುತ್ತಾರೆ.<br /> <br /> ಈ ಉತ್ಸವಕ್ಕೂ ಐತಿಹಾಸಿಕ ಹಿನ್ನೆಲೆ ಇದೆ. ಕೇರಳದಲ್ಲಿ ಶಂಖ ಒಂದರಿಂದ ಆರು ಗಂಡು ಹಾಗೂ ಒಂದು ಹೆಣ್ಣಿನ ಜನನವಾಯಿತು. ಅವರಲ್ಲಿ ನಾಲ್ಕನೆಯವ ಇಗ್ಗುತಪ್ಪ. ವರವೊಂದರ ಪರಿಣಾಮ ಕೊಡಗಿನ ಪಾಡಿಯ ಕ್ಷೇತ್ರದಲ್ಲಿ ಈತ ನೆಲೆ ನಿಂತ. ಅಂದಿನಿಂದ ಊರಿನ ಜನಕ್ಕೆಲ್ಲ ಒಳ್ಳೆಯದಾಯಿತು. ಈ ಹಿನ್ನೆಲೆಯಲ್ಲಿ ಇಗ್ಗುತಪ್ಪ ನೆಲೆ ನಿಂತ ನೆನಪಿಗಾಗಿ ಧಾನ್ಯ ಲಕ್ಷಿಯ ಪೂಜೆಯ ರೂಪದಲ್ಲಿ ಹುತ್ತರಿ ಹಬ್ಬ ಆಚರಿಸಲಾಗುತ್ತಿದೆ ಎನ್ನುವುದು ಪ್ರತೀತಿ.<br /> <br /> ಇಗ್ಗುತಪ್ಪ ದೇವರ ದೇವಸ್ಥಾನದಲ್ಲಿ ಕೊಡವರು ಮಗುವಿನ ನಾಮಕರಣವನ್ನು ಹೆಚ್ಚಾಗಿ ಮಾಡುತ್ತಾರೆ. ವರ್ಷದ 11 ತಿಂಗಳೂ(ಕರ್ಕಾಟಕ ಮಾಸ ಬಿಟ್ಟು) ತುಲಾಭಾರ ನಡೆಯುತ್ತದೆ. ಈ ದೇವಸ್ಥಾನದ ಗರ್ಭಗುಡಿಯನ್ನು ಕೆಲ ವರ್ಷದ ಹಿಂದೆ ಸರ್ಕಾರ ನವೀಕರಣಗೊಳಿಸಿದೆ. ಇದೀಗ ಇಗ್ಗುತಪ್ಪ ಭಕ್ತಜನ ಮಂಡಳಿಯವರು ದೇವಸ್ಥಾನದ ಹಳೆಯ ಕಟ್ಟಡಗಳನ್ನು ಕೆಡವಿ ಆಧುನೀಕರಣ ಮಾಡುತ್ತಿದ್ದಾರೆ. ಇದು ಈ ಬಾರಿಯ ಉತ್ಸವಕ್ಕೆ ಇನ್ನಷ್ಟು ಮೆರಗು ನೀಡಿದೆ. ಅದೇ ರೀತಿ ಸಮೀಪದಲ್ಲಿಯೇ ಇರುವ ನೆಲಜಿಯಲ್ಲಿನ ಇಗ್ಗುತಪ್ಪ ದೇವಸ್ಥಾನದಲ್ಲಯೂ ಬ್ರಹ್ಮ ಕಲಶೋತ್ಸವ ನಡೆಯಲಿದೆ. ಸಂಪರ್ಕಕ್ಕೆ: 9480449290<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>