<p>ಆನೇಕಲ್ನಿಂದ ಮೂರು ಕಿ.ಮೀ. ದೂರದಲ್ಲಿರುವ ಮುತ್ಯಾಲ ಮಡು(ವು) ಸುಂದರ ನಿಸರ್ಗ ತಾಣ. ಪ್ರವಾಸೋದ್ಯಮ ಇಲಾಖೆಯ ಉಪೇಕ್ಷೆಯಿಂದಾಗಿ ಇಂದಿಗೂ ತೆರೆಮರೆಯಲ್ಲೇ ಉಳಿದಿದೆ. <br /> <br /> 300 ಅಡಿಗಳ ಎತ್ತರದಿಂದ ಬೀಳುವ ಜಲಪಾತ ಇಲ್ಲಿನ ಆಕರ್ಷಣೆ. ಹಸಿರು ರಾಶಿಯ ನಡುವಿನ ಕಣಿವೆಯಲ್ಲಿರುವ ಈ ಸ್ಥಳ ನಯನ ಮನೋಹರ. ಟಿಪ್ಪುಸುಲ್ತಾನ್ ಕಾಲದಲ್ಲಿ ನಿರ್ಮಿಸಲಾದ ವ್ಯೆ ಪಾಯಿಂಟ್ ಮೂಲಕ ವೀಕ್ಷಿಸಿದರೆ ಕಣಿವೆ ಅದ್ಭುತವಾಗಿ ಕಾಣುತ್ತದೆ. ಈ ವ್ಯೆ ಪಾಯಿಂಟ್ ಸಹ ಈಗ ಶಿಥಿಲವಾಗಿದೆ.<br /> <br /> ಕುರುಚಲು ಅರಣ್ಯದ ನಡುವೆ ಇರುವ ಈ ತಾಣಕ್ಕೆ ಮೆಟ್ಟಿಲು ಇಳಿದು ಹೋಗಬೇಕು. ಇಲ್ಲಿ ನಡೆಯುವುದು ಮನಸ್ಸಿಗೆ ಮುದ ನೀಡುತ್ತದೆ. ಜಲಪಾತದ ಬಳಿ ಸಾಗುತ್ತಿದ್ದಂತೆ ಪನ್ನೀರಿನಂತೆ ಬೀಳುವ ನೀರಿನ ಹನಿಗಳು ಮೇಲಿನಿಂದ ಇಳಿದುಬಂದ ಆಯಾಸವನ್ನು ಮರೆಸುತ್ತವೆ.<br /> <br /> ಮಳೆಗಾಲದಲ್ಲಿ ಜಲಪಾತ ಭೋರ್ಗರೆಯುತ್ತದೆ. ಉಳಿದಂತೆ ಸಣ್ಣ ತೊರೆಯಂತೆ ಕಾಣುತ್ತದೆ. ಮುತ್ತಿನೋಪಾದಿಯಲ್ಲಿ ನೀರ ಹನಿಗಳು ಧುಮ್ಮಿಕ್ಕಿ ಮಡು ಸೃಷ್ಟಿಯಾಗಿರುವುದರಿಂದ ಇದಕ್ಕೆ ಮುತ್ಯಾಲ ಮಡು ಎಂಬ ಹೆಸರು ಬಂದಿದೆ. ಇಲ್ಲಿಂದ ಸ್ವಲ್ಪದೂರ ಕಣಿವೆಯಲ್ಲಿ ಸಾಗಿದರೆ ಶಂಖಚಕ್ರದ ಜಲಪಾತ ಸಹ ನೋಡಬಹುದು.<br /> <br /> ಪ್ರವಾಸೋದ್ಯಮ ಇಲಾಖೆ ಮುತ್ಯಾಲ ಮಡು ಅಭಿವೃದ್ಧಿಗಾಗಿ 5 ಕೋಟಿ ರೂ ವೆಚ್ಚದ ಮಾಸ್ಟರ್ಪ್ಲಾನ್ ರೂಪಿಸಿದೆ. ಇಲ್ಲಿ ಸುಂದರ ಉದ್ಯಾನ, ಪುಟಾಣಿ ರೈಲು, ಕಾರಂಜಿ ಮತ್ತಿತರ ಸೌಲಭ್ಯ ಕಲ್ಪಿಸಿ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ಯೋಜನೆ ಇದೆ. ಮುತ್ಯಾಲ ಮಡು ಬೆಂಗಳೂರಿನಿಂದ 40 ಕಿ.ಮೀ ದೂರದಲ್ಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆನೇಕಲ್ನಿಂದ ಮೂರು ಕಿ.ಮೀ. ದೂರದಲ್ಲಿರುವ ಮುತ್ಯಾಲ ಮಡು(ವು) ಸುಂದರ ನಿಸರ್ಗ ತಾಣ. ಪ್ರವಾಸೋದ್ಯಮ ಇಲಾಖೆಯ ಉಪೇಕ್ಷೆಯಿಂದಾಗಿ ಇಂದಿಗೂ ತೆರೆಮರೆಯಲ್ಲೇ ಉಳಿದಿದೆ. <br /> <br /> 300 ಅಡಿಗಳ ಎತ್ತರದಿಂದ ಬೀಳುವ ಜಲಪಾತ ಇಲ್ಲಿನ ಆಕರ್ಷಣೆ. ಹಸಿರು ರಾಶಿಯ ನಡುವಿನ ಕಣಿವೆಯಲ್ಲಿರುವ ಈ ಸ್ಥಳ ನಯನ ಮನೋಹರ. ಟಿಪ್ಪುಸುಲ್ತಾನ್ ಕಾಲದಲ್ಲಿ ನಿರ್ಮಿಸಲಾದ ವ್ಯೆ ಪಾಯಿಂಟ್ ಮೂಲಕ ವೀಕ್ಷಿಸಿದರೆ ಕಣಿವೆ ಅದ್ಭುತವಾಗಿ ಕಾಣುತ್ತದೆ. ಈ ವ್ಯೆ ಪಾಯಿಂಟ್ ಸಹ ಈಗ ಶಿಥಿಲವಾಗಿದೆ.<br /> <br /> ಕುರುಚಲು ಅರಣ್ಯದ ನಡುವೆ ಇರುವ ಈ ತಾಣಕ್ಕೆ ಮೆಟ್ಟಿಲು ಇಳಿದು ಹೋಗಬೇಕು. ಇಲ್ಲಿ ನಡೆಯುವುದು ಮನಸ್ಸಿಗೆ ಮುದ ನೀಡುತ್ತದೆ. ಜಲಪಾತದ ಬಳಿ ಸಾಗುತ್ತಿದ್ದಂತೆ ಪನ್ನೀರಿನಂತೆ ಬೀಳುವ ನೀರಿನ ಹನಿಗಳು ಮೇಲಿನಿಂದ ಇಳಿದುಬಂದ ಆಯಾಸವನ್ನು ಮರೆಸುತ್ತವೆ.<br /> <br /> ಮಳೆಗಾಲದಲ್ಲಿ ಜಲಪಾತ ಭೋರ್ಗರೆಯುತ್ತದೆ. ಉಳಿದಂತೆ ಸಣ್ಣ ತೊರೆಯಂತೆ ಕಾಣುತ್ತದೆ. ಮುತ್ತಿನೋಪಾದಿಯಲ್ಲಿ ನೀರ ಹನಿಗಳು ಧುಮ್ಮಿಕ್ಕಿ ಮಡು ಸೃಷ್ಟಿಯಾಗಿರುವುದರಿಂದ ಇದಕ್ಕೆ ಮುತ್ಯಾಲ ಮಡು ಎಂಬ ಹೆಸರು ಬಂದಿದೆ. ಇಲ್ಲಿಂದ ಸ್ವಲ್ಪದೂರ ಕಣಿವೆಯಲ್ಲಿ ಸಾಗಿದರೆ ಶಂಖಚಕ್ರದ ಜಲಪಾತ ಸಹ ನೋಡಬಹುದು.<br /> <br /> ಪ್ರವಾಸೋದ್ಯಮ ಇಲಾಖೆ ಮುತ್ಯಾಲ ಮಡು ಅಭಿವೃದ್ಧಿಗಾಗಿ 5 ಕೋಟಿ ರೂ ವೆಚ್ಚದ ಮಾಸ್ಟರ್ಪ್ಲಾನ್ ರೂಪಿಸಿದೆ. ಇಲ್ಲಿ ಸುಂದರ ಉದ್ಯಾನ, ಪುಟಾಣಿ ರೈಲು, ಕಾರಂಜಿ ಮತ್ತಿತರ ಸೌಲಭ್ಯ ಕಲ್ಪಿಸಿ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ಯೋಜನೆ ಇದೆ. ಮುತ್ಯಾಲ ಮಡು ಬೆಂಗಳೂರಿನಿಂದ 40 ಕಿ.ಮೀ ದೂರದಲ್ಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>