<p><span style="font-size:48px;">ಅ</span>ದೊಂದು ವಿಚಿತ್ರ ಎನಿಸುವ ಆಟ. ಶರೀರ ನಿಯಂತ್ರಣದಲ್ಲಿ ಇಟ್ಟುಕೊಂಡು ಏಣಿ ಏರಬೇಕು. ಸ್ವಲ್ಪ ಯಾಮಾರಿದರೂ ಸೀದಾ ಪಾತಾಳವೇ ಗತಿ, ಮೈಕೈ ಮುರಿದುಕೊಳ್ಳುವುದು ದಿಟ.<br /> <br /> ಇದೇ ಮೊಣಕಾಲು ಮುರಿ ಆಟ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಯಡಹಳ್ಳಿ, ಕೆಂಚರಾಮನಹಳ್ಳಿ ಗ್ರಾಮಗಳಲ್ಲಿ ಕಾಣಸಿಗುತ್ತದೆ ಈ ಆಟ. ಗಂಡಸುತನಕ್ಕೆ ಸವಾಲು ಎನ್ನುವ ಈ ಆಟಕ್ಕೆ `ಮಿಂಡರ ಗಣಿ', `ಮಿಂಡರ ಜೋಕಾಲಿ' ಎನ್ನುವ ಹೆಸರೂ ಇದೆ.<br /> <br /> ತರುಣರು ಶರೀರ ಸ್ವಾಸ್ಥ್ಯ ಕಾಪಾಡಿಕೊಳ್ಳುವ ಜೊತೆಗೆ ಮನಸ್ಸನ್ನು ಹಾಗೂ ಶರೀರವನ್ನು ಏಕಾಗ್ರ ಚಿತ್ತದೆಡೆಗೆ ಸಾಗಿಸುವ ಮೂಲ ಉದ್ದೇಶ ಈ ಆಟದ್ದು. ಅದೇನೇ ಇದ್ದರೂ ಹಲವರ ಪಾಲಿಗೆ ಇದು ಕಾಸಿಗಾಗಿ ಮಾಡುವ `ಕೌಶಲ್ಯವೂ' ಹೌದು.</p>.<p>ಈ ಆಟವನ್ನು ಷರತ್ತು ಕಟ್ಟುವ ಮೂಲಕ ಆಡುತ್ತಾರೆ. ಅಂದರೆ ಗೆದ್ದವರಿಗೆ ಹಣದ ರೂಪದ್ಲ್ಲಲೋ, ವಸ್ತುಗಳ ರೂಪದಲ್ಲಿಯೋ ಹಣ ಸಿಗುತ್ತದೆ. ಮಕ್ಕಳ ಹೊಟ್ಟೆ-ಬಟ್ಟೆಗಾಗಿ ಈ `ಸರ್ಕಸ್' ಮಾಡುವ ಅಪ್ಪಂದಿರೇ ಹೆಚ್ಚು.<br /> <br /> <strong>ಹೀಗಿದೆ ಆಟ</strong><br /> ವಿವಿಧ ಆಕಾರದ ಮೂರು ಕಂಬಗಳು ಇಲ್ಲಿರುತ್ತವೆ. ಏಣಿಗೆ ಬಳಸುವ ಬಿದಿರು ಇತ್ಯಾದಿ ಬಳಸಿ ಮೊಣಕಾಲು ಮುರಿ ಕಂಬ ಸಿದ್ಧಪಡಿಸಿರುವರು. ಈ ಏಣಿಯನ್ನು ಏರುವ ಸಂದರ್ಭದಲ್ಲಿ ಶರೀರದ ಸಮತೂಕ ಕಾಯ್ದುಕೊಂಡು ಏರಲು ಅಣಿಯಾಗಬೇಕು. ಕೈ ಹಿಡಿಯುವಾಗಲೂ ಎಚ್ಚರಿಕೆ ಅಗತ್ಯ.</p>.<p>ಜೊತೆಗೆ ಏಣಿಯ ಮೇಲೆ ಕಾಲು ಇಡುವಾಗ ಶರೀರದ ಭಾರ ಸಮಸ್ಥಿತಿಯಲ್ಲಿ ಇರುವಂತೆ ಇಟ್ಟುಕೊಳ್ಳಬೇಕು. ಸ್ವಲ್ಪ ತಪ್ಪಿದರೂ ಆ ಏಣಿಯು ತಿರುವು ಮುರುವಾಗುತ್ತದೆ. ಆಗ ದೇವರೇ ಗತಿ. ಏಣಿಯನ್ನು ಏರಿದಾತ ಅದರ ತುದಿಯನ್ನು ಮುಟ್ಟಿ ಬರುವುದು ಈ ಆಟದ ವಿಶೇಷ.ಅಂದ ಹಾಗೆ ಇದು ಶ್ರಾವಣ ಮಾಸದ ವಿಶೇಷ ಎನ್ನುತ್ತಾರೆ ಗ್ರಾಮಸ್ಥರು. ಆದರೆ ಈಚೆಗೆ ಈ ಕ್ರೀಡೆ ಮರೆಯಾಗುತ್ತಿದೆ ಎಂಬ ಆತಂಕವೂ ಅಲ್ಲಿಯವರದ್ದು.<br /> <strong>-ವೈ.ಬಿ.ಕಡಕೋಳ .</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size:48px;">ಅ</span>ದೊಂದು ವಿಚಿತ್ರ ಎನಿಸುವ ಆಟ. ಶರೀರ ನಿಯಂತ್ರಣದಲ್ಲಿ ಇಟ್ಟುಕೊಂಡು ಏಣಿ ಏರಬೇಕು. ಸ್ವಲ್ಪ ಯಾಮಾರಿದರೂ ಸೀದಾ ಪಾತಾಳವೇ ಗತಿ, ಮೈಕೈ ಮುರಿದುಕೊಳ್ಳುವುದು ದಿಟ.<br /> <br /> ಇದೇ ಮೊಣಕಾಲು ಮುರಿ ಆಟ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಯಡಹಳ್ಳಿ, ಕೆಂಚರಾಮನಹಳ್ಳಿ ಗ್ರಾಮಗಳಲ್ಲಿ ಕಾಣಸಿಗುತ್ತದೆ ಈ ಆಟ. ಗಂಡಸುತನಕ್ಕೆ ಸವಾಲು ಎನ್ನುವ ಈ ಆಟಕ್ಕೆ `ಮಿಂಡರ ಗಣಿ', `ಮಿಂಡರ ಜೋಕಾಲಿ' ಎನ್ನುವ ಹೆಸರೂ ಇದೆ.<br /> <br /> ತರುಣರು ಶರೀರ ಸ್ವಾಸ್ಥ್ಯ ಕಾಪಾಡಿಕೊಳ್ಳುವ ಜೊತೆಗೆ ಮನಸ್ಸನ್ನು ಹಾಗೂ ಶರೀರವನ್ನು ಏಕಾಗ್ರ ಚಿತ್ತದೆಡೆಗೆ ಸಾಗಿಸುವ ಮೂಲ ಉದ್ದೇಶ ಈ ಆಟದ್ದು. ಅದೇನೇ ಇದ್ದರೂ ಹಲವರ ಪಾಲಿಗೆ ಇದು ಕಾಸಿಗಾಗಿ ಮಾಡುವ `ಕೌಶಲ್ಯವೂ' ಹೌದು.</p>.<p>ಈ ಆಟವನ್ನು ಷರತ್ತು ಕಟ್ಟುವ ಮೂಲಕ ಆಡುತ್ತಾರೆ. ಅಂದರೆ ಗೆದ್ದವರಿಗೆ ಹಣದ ರೂಪದ್ಲ್ಲಲೋ, ವಸ್ತುಗಳ ರೂಪದಲ್ಲಿಯೋ ಹಣ ಸಿಗುತ್ತದೆ. ಮಕ್ಕಳ ಹೊಟ್ಟೆ-ಬಟ್ಟೆಗಾಗಿ ಈ `ಸರ್ಕಸ್' ಮಾಡುವ ಅಪ್ಪಂದಿರೇ ಹೆಚ್ಚು.<br /> <br /> <strong>ಹೀಗಿದೆ ಆಟ</strong><br /> ವಿವಿಧ ಆಕಾರದ ಮೂರು ಕಂಬಗಳು ಇಲ್ಲಿರುತ್ತವೆ. ಏಣಿಗೆ ಬಳಸುವ ಬಿದಿರು ಇತ್ಯಾದಿ ಬಳಸಿ ಮೊಣಕಾಲು ಮುರಿ ಕಂಬ ಸಿದ್ಧಪಡಿಸಿರುವರು. ಈ ಏಣಿಯನ್ನು ಏರುವ ಸಂದರ್ಭದಲ್ಲಿ ಶರೀರದ ಸಮತೂಕ ಕಾಯ್ದುಕೊಂಡು ಏರಲು ಅಣಿಯಾಗಬೇಕು. ಕೈ ಹಿಡಿಯುವಾಗಲೂ ಎಚ್ಚರಿಕೆ ಅಗತ್ಯ.</p>.<p>ಜೊತೆಗೆ ಏಣಿಯ ಮೇಲೆ ಕಾಲು ಇಡುವಾಗ ಶರೀರದ ಭಾರ ಸಮಸ್ಥಿತಿಯಲ್ಲಿ ಇರುವಂತೆ ಇಟ್ಟುಕೊಳ್ಳಬೇಕು. ಸ್ವಲ್ಪ ತಪ್ಪಿದರೂ ಆ ಏಣಿಯು ತಿರುವು ಮುರುವಾಗುತ್ತದೆ. ಆಗ ದೇವರೇ ಗತಿ. ಏಣಿಯನ್ನು ಏರಿದಾತ ಅದರ ತುದಿಯನ್ನು ಮುಟ್ಟಿ ಬರುವುದು ಈ ಆಟದ ವಿಶೇಷ.ಅಂದ ಹಾಗೆ ಇದು ಶ್ರಾವಣ ಮಾಸದ ವಿಶೇಷ ಎನ್ನುತ್ತಾರೆ ಗ್ರಾಮಸ್ಥರು. ಆದರೆ ಈಚೆಗೆ ಈ ಕ್ರೀಡೆ ಮರೆಯಾಗುತ್ತಿದೆ ಎಂಬ ಆತಂಕವೂ ಅಲ್ಲಿಯವರದ್ದು.<br /> <strong>-ವೈ.ಬಿ.ಕಡಕೋಳ .</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>