ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ಕಾಂಗ್ರೆಸ್‌ನಲ್ಲಿ ಮೋದಿ: ತಂತ್ರಜ್ಞಾನದ ಸಹಯೋಗದಿಂದ ದೇಶ ಸದೃಢ
LIVE

ಪ್ರಧಾನಮಂತ್ರಿ ನರೇಂದ್ರಮೋದಿ ಶುಕ್ರವಾರ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಭಾರತೀಯ ವಿಜ್ಞಾನ ಕಾಂಗ್ರೆಸ್‌ಗೆ ಚಾಲನೆ ನೀಡಲಿದ್ದಾರೆ. ಐದು ದಿನಗಳ ಈ ಕಾರ್ಯಕ್ರಮದಲ್ಲಿ 15,000 ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದಾರೆ. 150 ಕ್ಕೂ ಹೆಚ್ಚು ಸಂಘ– ಸಂಸ್ಥೆಗಳು ಪಾಲ್ಗೊಳ್ಳುತ್ತಿವೆ. ಅವುಗಳಲ್ಲಿ 24 ದೇಶಗಳ 74 ಮಂದಿ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ನೊಬೆಲ್‌ ಪುರಸ್ಕೃತ ವಿಜ್ಞಾನಿಗಳಾದ ಜರ್ಮನಿಯ ಪ್ರೊ. ಸ್ಟೀಫನ್‌ ಹೆಲ್‌, ಇಸ್ರೇಲ್‌ನ ಪ್ರೊ. ಅಡಾ ಇಯೊನಾಥ್ ಅವರಿಂದ ಉಪನ್ಯಾಸ ಏರ್ಪಡಿಸಲಾಗಿದೆ.
Last Updated 3 ಜನವರಿ 2020, 6:22 IST
ಅಕ್ಷರ ಗಾತ್ರ
06:2103 Jan 2020

ಭಾಷಣ ಮುಕ್ತಾಯ

ಹೊಸ ವರ್ಷದ ಶುಭಾಶಯಗಳೊಂದಿಗೆ ನರೇಂದ್ರ ಮೋದಿ ಭಾಷಣ ಮುಗಿಸಿದರು.

05:4203 Jan 2020

ತಂತ್ರಜ್ಞಾನದ ಸಹಯೋಗದಿಂದ ದೇಶ ಸದೃಢ

ತಂತ್ರಜ್ಞಾನವು ನಿಷ್ಪಕ್ಷಪಾತವಾಗಿರುತ್ತೆ. ಮಾನವೀಯತೆ ಮತ್ತು ಅಧುನಿಕ ತಂತ್ರಜ್ಞಾನದ ಸಹಯೋಗದಿಂದ ಹೊಸ ದಶಕದಲ್ಲಿ ಹೊಸ ಭಾರತವನ್ನು ಮತ್ತಷ್ಟು ಸದೃಢಗೊಳಿಸಲು ಸಾಧ್ಯವಾಗುತ್ತದೆ. –ನರೇಂದ್ರ ಮೋದಿ

05:4103 Jan 2020

ಕ್ಷಯ ನಿರ್ಮೂಲನೆಯ ಗುರಿ

ಆರೋಗ್ಯವೇ ದೊಡ್ಡ ಸಂಪತ್ತು. ಚಿನ್ನದ ತುಣುಕಲ್ಲ ಎಂದು ಮಹಾತ್ಮಗಾಂಧಿ ಒಮ್ಮೆ ಹೇಳಿದ್ದರು. 2024ರ ಹೊತ್ತಿಗೆ ಕ್ಷಯ ರೋಗ ನಿರ್ಮೂಲನೆಯ ಗುರಿ ಹಾಕಿಕೊಂಡಿದ್ದೇವೆ. ಜಗತ್ತಿನ ದೊಡ್ಡ ಔಷಧ ರಫ್ತು ದೇಶವಾಗುವ ಗುರಿ ಇದೆ. –ನರೇಂದ್ರ ಮೋದಿ

05:3703 Jan 2020

ರೈತ ಕೇಂದ್ರಿತ ಪರಿಹಾರ ಯೋಚಿಸಿ

2022ರ ಹೊತ್ತಿಗೆ ನಾವು ಕಚ್ಚಾತೈಲದ ಆಮದನ್ನು ಶೇ 10ರಷ್ಟು ಕಡಿಮೆ ಮಾಡುವಂತೆ ಆಗಬೇಕು. ಜೈವಿಕ ಇಂಧನ, ಎಥೆನಾಲ್‌ ಬಳಕೆಯಿಂದ ಇದು ಸಾಧ್ಯವಾಗುತ್ತೆ. ನೀವು ಈ ಬಗ್ಗೆ ಯೋಚಿಸಿ. ಭಾರತವನ್ನು 5 ಟ್ರಿಲಿಯನ್ ಡಾಲರ್ ಅರ್ಥವ್ಯವಸ್ಥೆಯಾಗಿಲು ನಿಮ್ಮೆಲ್ಲರ ಸಹಕಾರ ಬೇಕಿದೆ. ಕೃಷಿ ತ್ಯಾಜ್ಯ ನಿರ್ವಹಣೆ, ಶುದ್ಧ ಕುಡಿಯುವ ನೀರು ಸೇರಿದಂತೆ ಹಲವು ಸಮಸ್ಯೆಗಳಿಗೆ ರೈತ ಕೇಂದ್ರಿತ ಪರಿಹಾರಗಳನ್ನು ಯೋಚಿಸಿ. –ನರೇಂದ್ರ ಮೋದಿ

05:3503 Jan 2020

ಸುಲಭದ ತಂತ್ರಗಳ ಬಗ್ಗೆ ಯೋಚಿಸಿ

ಏಕ ಬಳಕೆ ಪ್ಲಾಸ್ಟಿಕ್ ನಾವು ನಿಷೇಧಿಸಿದ್ದೇವೆ. ಈಗ ಪ್ಲಾಸ್ಟಿಕ್‌ಗಿಂತಲೂ ಕಡಿಮೆ ಬೆಲೆಯ ಬೇರೊಂದು ಉಪಕರಣದ ಬಗ್ಗೆ ಯೋಚಿಸಿ. ಎಲೆಕ್ಟ್ರಾನಿಕ್ ಉಪಕರಣಗಳಲ್ಲಿರುವ ಲೋಹವನ್ನು ಹೊರತೆಗೆದು ಬಳಸಲು ಸಾಧ್ಯವಾಗುವ ಸುಲಭದ ತಂತ್ರಗಳ ಬಗ್ಗೆ ಯೋಚಿಸಿ. ಇದರಿಂದ ವಾತಾವರಣವೂ ಸುರಕ್ಷಿತವಾಗುತ್ತದೆ. ಸಣ್ಣ ಉದ್ಯೋಗಗಳು ಸೃಷ್ಟಿಯಾಗುತ್ತವೆ. –ನರೇಂದ್ರ ಮೋದಿ

05:3203 Jan 2020

ನೀರು, ಬೀಜಕ್ಕಾಗಿ ಹೊಸ ಯೋಚನೆ ಬೇಕು

ನೀರು ನಿರ್ವಹಣೆ ಬಗ್ಗೆ ವಿಜ್ಞಾನಿಗಳು ಹೆಚ್ಚು ಗಮನ ನೀಡಬೇಕು. ಮನೆಯಿಂದ ಹೊರಹೋಗುವ ನೀರನ್ನು ಕೃಷಿಗೆ ಹೇಗೆ ಸುಲಭವಾಗಿ, ಕಡಿಮೆ ಖರ್ಚಿನಲ್ಲಿ ಬಳಸಬಹುದು ಎಂಬ ಬಗ್ಗೆ ಯೋಚಿಸಬೇಕಿದೆ. ಕಡಿಮೆ ನೀರಿನಲ್ಲಿ ಬೆಳೆಯುವ ಮತ್ತು ಸಮೃದ್ಧ ಪೋಷಕಾಂಶಗಳನ್ನು ಕೊಡುವ ಬೀಜಗಳ ಅಭಿವೃದ್ಧಿ ಆಗಬೇಕಿದೆ. ದೇಶದಾದ್ಯಂತ ನೀಡಿರುವ ಮಣ್ಣು ಕಾರ್ಡ್‌ಗಳ ದತ್ತಾಂಶವನ್ನು ಇದಕ್ಕೆ ಬಳಸಿಕೊಳ್ಳಬಹುದು. –ನರೇಂದರ ಮೋದಿ.

05:3003 Jan 2020

ತಂತ್ರಜ್ಞಾನ ಬದುಕು ಸುಧಾರಿಸಿದೆ

ರಿಯಲ್ ಟೈಂ ಮಾನಿಟರಿಂಗ್, ಜಿಯೊ ಟ್ಯಾಗಿಂಗ್‌ ಮೂಲಕ ಆಡಳಿತ ಸುಧಾರಣೆ, ಯೋಜನೆಗಳ ಅನುಷ್ಠಾನಕ್ಕೆ ವೇಗ ಸಿಕ್ಕಿದೆ. ರೈತರು ಇನ್ನೊಬ್ಬರ ಹಂಗಿಲ್ಲದೆ ತಮ್ಮ ಉತ್ಪನ್ನಗಳನ್ನು ಮಾರುವಂತಾಗಿದೆ. ರೈತರಿಗೆ ಅಗತ್ಯವಿರುವ ಹವಾಮಾನ ಮುನ್ಸೂಚನೆಯ ಮಾಹಿತಿಯನ್ನು ತಮ್ಮ ಅಂಗೈಯಲ್ಲಿರುವ ಫೋನ್‌ಗಳಲ್ಲಿ ಸುಲಭವಾಗಿ ಪಡೆದುಕೊಳ್ಳುತ್ತಿದ್ದಾರೆ. –ನರೇಂದ್ರ ಮೋದಿ

05:2903 Jan 2020

ತಂತ್ರಜ್ಞಾನ ಸರ್ವವ್ಯಾಪಿ: ಮೋದಿ

ಸ್ವಚ್ಛ ಭಾರತದಿಂದ ಆಯುಷ್ಮಾನ್‌ ಭಾರತ್‌ವರೆಗೆ ಬಹುತೇಕ ಯೋಜನೆಗಳಿಗೆ ತಂತ್ರಜ್ಞಾನದ ನೆರವು ಸಿಕ್ಕಿದೆ. ಸರ್ಕಾರವು ಆಡಳಿತಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ದೊಡ್ಡಮಟ್ಟದಲ್ಲಿ ಬಳಸಿಕೊಳ್ಳುತ್ತಿದ್ದೇವೆ. ಈ ಹಿಂದೆ ಎಂದಿಗೂ ಇಂಥ ಪ್ರಯೋಗಗಳು ನಡೆದಿರಲಿಲ್ಲ. ನಿನ್ನೆ ಒಮ್ಮೆಲೆ ದೇಶದ ಎಲ್ಲ ರೈತರ ಖಾತೆಗಳಿಗೆ ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿಯನ್ನು ಜಮಾ ಮಾಡಿದೆವು. ಇದು ಸಾಧ್ಯವಾಗಿದ್ದು ತಂತ್ರಜ್ಞಾನದ ನೆರವಿನಿಂದ. ದೇಶದ ಮೂಲೆಮೂಲೆಗೆ ಶೌಚಾಲಯ, ವಿದ್ಯುತ್ ತಲುಪಲು ಸಹ ತಂತ್ರಜ್ಞಾನವೇ ಕಾರಣ. –ನರೇಂದ್ರ ಮೋದಿ

05:2703 Jan 2020

ಪರಿವರ್ತನೆಗೆ ಪ್ರೋತ್ಸಾಹ

ತಂತ್ರಜ್ಙಾನದ ಸದ್ಬಳಕೆಯಿಂದಲೇ ದೇಶದ ಎಲ್ಲರೂ ಸರ್ಕಾರದ ಭಾಗವಾಗಲು ಸಾಧ್ಯವಾಗಿದೆ. ಇಂಥ ಪರಿವರ್ತನೆಯನ್ನು ನಾವು ಪ್ರೋಥ್ಸಾಹಿಸಬೇಕು, ಸದೃಢಪಡಿಸಬೇಕು. –ನರೇಂದ್ರ ಮೋದಿ

05:2503 Jan 2020

ಆವಿಷ್ಕಾರ, ಪೇಟೆಂಟ್, ಉತ್ಪಾದನೆ, ಸಮೃದ್ಧಿಯ ಮಂತ್ರ

ನಮ್ಮ ವಿಜ್ಞಾನಿಗಳು ಸಾಕಷ್ಟು ಸಾಧಿಸಿದ್ದಾರೆ. ಭಾರತದ ಅಭಿವೃದ್ಧಿ ಕಥನವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಸಾಧನೆಯು ನಿರ್ಧರಿಸುತ್ತೆ. ಸಂಶೋಧಿಸಿ, ಪೇಟೆಂಟ್ ಪಡೆದುಕೊಳ್ಳಿ, ಉತ್ಪಾದಿಸಿ ಮತ್ತು ಸಮೃದ್ಧರಾಗಿರಿ ಎನ್ನುವ ನಾಲ್ಕು ಮಂತ್ರಗಳನ್ನು ನಾವು ಅಳವಡಿಸಿಕೊಳ್ಳಬೇಕು. ಉತ್ಪಾದನೆ ಹೆಚ್ಚಾದರೆ ಸಮೃದ್ಧಿ ಬರುತ್ತದೆ. –ನರೇಂದ್ರ ಮೋದಿ