<p><strong>ಮಹದೇವಪುರ:</strong> ಮಂಡೂರು ಗ್ರಾಮದ ಕಸದ ತೊಟ್ಟಿಯಲ್ಲಿ ನೂರಾರು ರೈತರ ಸಾಲಮನ್ನಾ ಪತ್ರಗಳು, ಪ್ಯಾನ್ಕಾರ್ಡ್ ಮತ್ತು ಆಧಾರ್ ಕಾರ್ಡ್ಗಳು ಪೌರಕಾರ್ಮಿಕರಿಗೆ ಸಿಕ್ಕಿವೆ.</p>.<p>ಮಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಜ್ಯೋತಿಪುರ, ಮಾರಸಂದ್ರ, ಗುಂಡೂರು, ತಿರುಮೇನಹಳ್ಳಿ, ಕಟ್ಟುಗೊಲ್ಲಹಳ್ಳಿ, ಅಂಚರಹಳ್ಳಿ, ಕೊಡಿಗೆಹಳ್ಳಿ, ರಘುವನಹಳ್ಳಿ, ಬೊಮ್ಮೆನಹಳ್ಳಿ, ಲಗುಮೇನಹಳ್ಳಿ, ಹುಸ್ಕೂರು, ನಿಂಬೆಕಾಯಿಪುರ ಗ್ರಾಮದವರ ಈ ದಾಖಲೆಗಳು ಸಿಕ್ಕಿವೆ.</p>.<p>‘ಅಂಚೆ ಕಚೇರಿಯ ನೌಕರರು ಸರಿಯಾಗಿ ವಿತರಿಸದೆ ಉದಾಸೀನದಿಂದ ಎಲ್ಲವನ್ನು ಕಸದ ತೊಟ್ಟಿಗೆ ಎಸೆದಿದ್ದಾರೆ’ ಎಂದು ಸ್ಥಳೀಯರಾದ ಬಸವರಾಜು ‘ಪ್ರಜಾವಾಣಿ'ಗೆ ತಿಳಿಸಿದರು.</p>.<p>‘ಮಂಡೂರು ಹಾಗೂ ಆವಲಹಳ್ಳಿ ಪೋಸ್ಟ್ಮನ್ಗಳ ನಡುವೆ ವೈಯಕ್ತಿಕ ದ್ವೇಷವಿರುವ ಹಿನ್ನೆಲೆಯಲ್ಲಿ ಸರಿಯಾಗಿ ಅವರಿಬ್ಬರೂ ಕಾರ್ಯನಿರ್ವಹಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಸದ ತೊಟ್ಟಿಯಲ್ಲಿ ಕಾರ್ಡ್ಗಳನ್ನು ಎಸೆದಿರುವ ಸಾಧ್ಯತೆ ಇದೆ. ಎರಡೂ ಅಂಚೆ ಕಚೇರಿಯ ಪೋಸ್ಟ್ಮನ್ಗಳ ವಿರುದ್ಧ ಕ್ರಮವನ್ನು ಕೈಗೊಳ್ಳಬೇಕು’ ಎಂದು ಸ್ಥಳೀಯರು ಆಗ್ರಹಿಸಿದರು.</p>.<p>ಅಂಚೆ ಇಲಾಖೆಯ ಅಧಿಕಾರಿಗಳನ್ನು ಸ್ಥಳೀಯರು ಸಂಪರ್ಕಿಸಿದಾಗ ಪ್ರತಿಕ್ರಿಯಿಸಿದ ಅವರು, ‘ಕಾರ್ಡ್ಗಳನ್ನು ಉದ್ದೇಶಪೂರ್ವಕವಾಗಿ ಕಸದ ತೊಟ್ಟಿಗೆ ಹಾಕಿಲ್ಲ. ಅಂಚೆ ಕಚೇರಿ ಸಹಾಯಕರ ಅಜಾಗರೂಕತೆಯಿಂದ ಈ ರೀತಿ ನಡೆದಿದೆ. ಕೂಡಲೇ ಸಮಸ್ಯೆಯನ್ನು ಬಗೆಹರಿಸಲಾಗುವುದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಹದೇವಪುರ:</strong> ಮಂಡೂರು ಗ್ರಾಮದ ಕಸದ ತೊಟ್ಟಿಯಲ್ಲಿ ನೂರಾರು ರೈತರ ಸಾಲಮನ್ನಾ ಪತ್ರಗಳು, ಪ್ಯಾನ್ಕಾರ್ಡ್ ಮತ್ತು ಆಧಾರ್ ಕಾರ್ಡ್ಗಳು ಪೌರಕಾರ್ಮಿಕರಿಗೆ ಸಿಕ್ಕಿವೆ.</p>.<p>ಮಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಜ್ಯೋತಿಪುರ, ಮಾರಸಂದ್ರ, ಗುಂಡೂರು, ತಿರುಮೇನಹಳ್ಳಿ, ಕಟ್ಟುಗೊಲ್ಲಹಳ್ಳಿ, ಅಂಚರಹಳ್ಳಿ, ಕೊಡಿಗೆಹಳ್ಳಿ, ರಘುವನಹಳ್ಳಿ, ಬೊಮ್ಮೆನಹಳ್ಳಿ, ಲಗುಮೇನಹಳ್ಳಿ, ಹುಸ್ಕೂರು, ನಿಂಬೆಕಾಯಿಪುರ ಗ್ರಾಮದವರ ಈ ದಾಖಲೆಗಳು ಸಿಕ್ಕಿವೆ.</p>.<p>‘ಅಂಚೆ ಕಚೇರಿಯ ನೌಕರರು ಸರಿಯಾಗಿ ವಿತರಿಸದೆ ಉದಾಸೀನದಿಂದ ಎಲ್ಲವನ್ನು ಕಸದ ತೊಟ್ಟಿಗೆ ಎಸೆದಿದ್ದಾರೆ’ ಎಂದು ಸ್ಥಳೀಯರಾದ ಬಸವರಾಜು ‘ಪ್ರಜಾವಾಣಿ'ಗೆ ತಿಳಿಸಿದರು.</p>.<p>‘ಮಂಡೂರು ಹಾಗೂ ಆವಲಹಳ್ಳಿ ಪೋಸ್ಟ್ಮನ್ಗಳ ನಡುವೆ ವೈಯಕ್ತಿಕ ದ್ವೇಷವಿರುವ ಹಿನ್ನೆಲೆಯಲ್ಲಿ ಸರಿಯಾಗಿ ಅವರಿಬ್ಬರೂ ಕಾರ್ಯನಿರ್ವಹಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಸದ ತೊಟ್ಟಿಯಲ್ಲಿ ಕಾರ್ಡ್ಗಳನ್ನು ಎಸೆದಿರುವ ಸಾಧ್ಯತೆ ಇದೆ. ಎರಡೂ ಅಂಚೆ ಕಚೇರಿಯ ಪೋಸ್ಟ್ಮನ್ಗಳ ವಿರುದ್ಧ ಕ್ರಮವನ್ನು ಕೈಗೊಳ್ಳಬೇಕು’ ಎಂದು ಸ್ಥಳೀಯರು ಆಗ್ರಹಿಸಿದರು.</p>.<p>ಅಂಚೆ ಇಲಾಖೆಯ ಅಧಿಕಾರಿಗಳನ್ನು ಸ್ಥಳೀಯರು ಸಂಪರ್ಕಿಸಿದಾಗ ಪ್ರತಿಕ್ರಿಯಿಸಿದ ಅವರು, ‘ಕಾರ್ಡ್ಗಳನ್ನು ಉದ್ದೇಶಪೂರ್ವಕವಾಗಿ ಕಸದ ತೊಟ್ಟಿಗೆ ಹಾಕಿಲ್ಲ. ಅಂಚೆ ಕಚೇರಿ ಸಹಾಯಕರ ಅಜಾಗರೂಕತೆಯಿಂದ ಈ ರೀತಿ ನಡೆದಿದೆ. ಕೂಡಲೇ ಸಮಸ್ಯೆಯನ್ನು ಬಗೆಹರಿಸಲಾಗುವುದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>