ಕೆ.ಆರ್. ಮಾರುಕಟ್ಟೆ, ವಿಜಯನಗರ, ರಾಜಾಜಿನಗರ, ಶಿವಾಜಿನಗರ ಇನ್ನು ಕೆಲವು ಸ್ಥಳಗಳ ಸುತ್ತಮುತ್ತ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ಕಸದ ರಾಶಿ ಸುತ್ತ ಸೇರುವ ದನಗಳು ಏನೇನೋ ತಿಂದು ಬದುಕುತ್ತವೆ. ಇದರಲ್ಲಿ ಕೆಲವು ಬೀಡಾಡಿ ದನಗಳು ಇನ್ನು ಕೆಲವು ಸಾಕು ದನಗಳು. ಈ ಸಾಕು ದನಗಳ ಮಾಲೀಕರು ಕೇವಲ ಹಾಲಿಗಾಗಿ ಅವುಗಳನ್ನು ಉಪಯೋಗಿಸಿಕೊಂಡು ಬೀಡಾಡಿ ದನಗಳ ಜೊತೆ ಬಿಟ್ಟಿ ಮೇಯಲು ಬಿಡುತ್ತಾರೆ. ವಿಶೇಷವೆಂದರೆ ಇಂಥ ದನಗಳ ಕಿವಿಯಲ್ಲಿ ಅವುಗಳಿಗೆ ಒಂದೊಂದು ಸಂಖ್ಯೆ ಮತ್ತು ಮಾಲೀಕರ ಫೋನ್ ನಂಬರನ್ನು ನಮೂದಿಸಿ ಬೆಳಿಗ್ಗೆಯಿಂದ ಸಂಜೆಯವರೆಗೆ ಬೀದಿಗೆ ಬಿಟ್ಟಿರುತ್ತಾರೆ. ಸಂಜೆಯಾಗುತ್ತಿದ್ದಂತೆ ಈ ದನಗಳನ್ನು ಮನೆಗೆ ಎಳೆದೊಯ್ದು ಹಾಲು ಕರೆದು ಮತ್ತೆ ಬೀದಿಗೆ ಬಿಡುತ್ತಾರೆ.