ಸಮ್ಮೇಳನಕ್ಕೆಂದು ಭಾರತದ ವಿವಿಧೆಡೆಯಿಂದ ಸುಮಾರು 128 ಸಂಶೋಧನೆ ಮತ್ತು ಪ್ರಾಜೆಕ್ಟ್ ಪ್ರತಿಗಳು ಬಂದಿದ್ದವು. ಅದರಲ್ಲಿ ಒಟ್ಟು 80 ಪ್ರತಿಗಳು ಆಯ್ಕೆಯಾಗಿದ್ದು, ಅವುಗಳ ನಿರೂಪಣೆ ನಡೆಯಿತು. ದೆಹಲಿ, ಹೈದರಾಬಾದ್, ಮಂಗಳೂರು ಇನ್ನೂ ಹಲವೆಡೆಯಿಂದ ವಿದ್ಯಾರ್ಥಿಗಳು ಇಲ್ಲಿ ಸೇರಿದ್ದರು. 80 ಪ್ರತಿಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿ, ನಿರೂಪಣೆ ನಡೆಸಲಾಯಿತು. ಇದರಲ್ಲಿ ಆಯ್ಕೆಗೊಂಡವರಿಗೆ ಬಹುಮಾನ ವಿತರಿಸಲಾಯಿತು. ಸಮ್ಮೇಳನದ ಬಗ್ಗೆ ಮಾತನಾಡಿದ ಎ.ಬಿ.ಶ್ರೀನಿವಾಸನ್, `ವಿದ್ಯಾರ್ಥಿಗಳಿಂದ ಪ್ರದರ್ಶಿತಗೊಂಡ ಈ ಹೊಸ ಆವಿಷ್ಕಾರಗಳನ್ನು ನೋಡಿ ಆಶ್ಚರ್ಯಚಕಿತನಾದೆ. ನನ್ನ ಕಾಲೇಜು ದಿನಗಳೂ ನೆನಪಿಗೆ ಬಂದವು~ ಎಂದು ಅಲ್ಲಿ ಸೇರಿದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಹಾರೈಸಿದರು.