<p>ಅಕ್ಷಯ ತೃತೀಯದಂದು ಬಂಗಾರ ಕೊಂಡರೆ ಅದು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಅಲ್ಪ ಸ್ವಲ್ಪ ಕೂಡಿಟ್ಟ ಹಣದಿಂದ ಅಂದು ಸ್ವಲ್ಪವಾದರೂ ಚಿನ್ನ ಖರೀದಿಸುತ್ತಾರೆ. <br /> ಚಿನ್ನದ ಬೆಲೆ ಹೆಚ್ಚಾಗುತ್ತಿದ್ದರೂ ಚಿನ್ನ ಕೊಳ್ಳುವವರು ಮಾತ್ರ ಕಡಿಮೆಯಾಗಿಲ್ಲ. ಇಂಥ ಚಿನ್ನದ ವ್ಯಾಮೋಹಿಗಳಿಗಾಗಿ ತೆಲುಗು ಸಾಹಿತಿ ವಾಸಿರೆಡ್ಡಿ ವೇಣುಗೋಪಾಲ್ ಬರೆದಿರುವ `ಚಿನ್ನ ನೀನೆಷ್ಟು ಚೆನ್ನ!~ ಕೃತಿಯನ್ನು ಶಂಕರಾನಂದ್ ಅವರು ಕನ್ನಡಕ್ಕೆ ತಂದಿದ್ದಾರೆ.<br /> <br /> ವಸಂತ ಪ್ರಕಾಶನದ ಈ ಕೃತಿಯನ್ನು `ಬಂಗಾರದ ಬಗೆಗೆ ಕನ್ನಡದಲ್ಲಿ ಇರುವ ಏಕೈಕ ಪುಸ್ತಕವಿದು~ ಎಂದು ಅನುವಾದಕರು ಹೇಳಿಕೊಂಡಿದ್ದಾರೆ. ಚಿನ್ನದ ಕ್ಯಾರೆಟ್, ಅದರ ಅಂತರರಾಷ್ಟ್ರೀಯ ಮಾರುಕಟ್ಟೆ, ವಿದ್ಯಮಾನಗಳು, ಉತ್ಪತ್ತಿ ಮತ್ತು ಬೇಡಿಕೆ ನಡುವಿನ ವ್ಯತ್ಯಾಸದ ವಿಶ್ಲೇಷಣೆ, ಚಿನ್ನವನ್ನು ಎಲ್ಲಿ ಖರೀದಿಸಬೇಕು, ಹೀಗೆ ಖರೀದಿಸಬೇಕು, ಉಂಗುರ ತೊಡಿಸುವುದು ಹೇಗೆ ಮೊದಲಾದ ಸಣ್ಣಪುಟ್ಟ ವಿಷಯಗಳನ್ನೂ ಪುಸ್ತಕ ಒಳಗೊಂಡಿದೆ. ಈ ಪುಸ್ತಕ ನಗರದ ಪುಸ್ತಕ ಮಳಿಗೆಗಳಲ್ಲೂ ಲಭ್ಯ. ಬೆಲೆ 120 ರೂ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಕ್ಷಯ ತೃತೀಯದಂದು ಬಂಗಾರ ಕೊಂಡರೆ ಅದು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಅಲ್ಪ ಸ್ವಲ್ಪ ಕೂಡಿಟ್ಟ ಹಣದಿಂದ ಅಂದು ಸ್ವಲ್ಪವಾದರೂ ಚಿನ್ನ ಖರೀದಿಸುತ್ತಾರೆ. <br /> ಚಿನ್ನದ ಬೆಲೆ ಹೆಚ್ಚಾಗುತ್ತಿದ್ದರೂ ಚಿನ್ನ ಕೊಳ್ಳುವವರು ಮಾತ್ರ ಕಡಿಮೆಯಾಗಿಲ್ಲ. ಇಂಥ ಚಿನ್ನದ ವ್ಯಾಮೋಹಿಗಳಿಗಾಗಿ ತೆಲುಗು ಸಾಹಿತಿ ವಾಸಿರೆಡ್ಡಿ ವೇಣುಗೋಪಾಲ್ ಬರೆದಿರುವ `ಚಿನ್ನ ನೀನೆಷ್ಟು ಚೆನ್ನ!~ ಕೃತಿಯನ್ನು ಶಂಕರಾನಂದ್ ಅವರು ಕನ್ನಡಕ್ಕೆ ತಂದಿದ್ದಾರೆ.<br /> <br /> ವಸಂತ ಪ್ರಕಾಶನದ ಈ ಕೃತಿಯನ್ನು `ಬಂಗಾರದ ಬಗೆಗೆ ಕನ್ನಡದಲ್ಲಿ ಇರುವ ಏಕೈಕ ಪುಸ್ತಕವಿದು~ ಎಂದು ಅನುವಾದಕರು ಹೇಳಿಕೊಂಡಿದ್ದಾರೆ. ಚಿನ್ನದ ಕ್ಯಾರೆಟ್, ಅದರ ಅಂತರರಾಷ್ಟ್ರೀಯ ಮಾರುಕಟ್ಟೆ, ವಿದ್ಯಮಾನಗಳು, ಉತ್ಪತ್ತಿ ಮತ್ತು ಬೇಡಿಕೆ ನಡುವಿನ ವ್ಯತ್ಯಾಸದ ವಿಶ್ಲೇಷಣೆ, ಚಿನ್ನವನ್ನು ಎಲ್ಲಿ ಖರೀದಿಸಬೇಕು, ಹೀಗೆ ಖರೀದಿಸಬೇಕು, ಉಂಗುರ ತೊಡಿಸುವುದು ಹೇಗೆ ಮೊದಲಾದ ಸಣ್ಣಪುಟ್ಟ ವಿಷಯಗಳನ್ನೂ ಪುಸ್ತಕ ಒಳಗೊಂಡಿದೆ. ಈ ಪುಸ್ತಕ ನಗರದ ಪುಸ್ತಕ ಮಳಿಗೆಗಳಲ್ಲೂ ಲಭ್ಯ. ಬೆಲೆ 120 ರೂ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>