ನಾಯಕ ಪ್ರತಾಪ್ ನಾರಾಯಣ್, ತಂದೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅರ್ಪಿತಾ ಗೌಡ ಈ ಚಿತ್ರದ ನಾಯಕಿ. ಮಾಸ್ಟರ್ ವಿನಯ್ ಮಗನಾಗಿ ಕಾಣಿಸಿಕೊಳ್ಳುತ್ತಿದ್ದಾನೆ. ನಾಲ್ಕು ಹಾಡುಗಳಿಗೆ ಎಸ್. ಪ್ರದೀಪ್ ವರ್ಮಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಮೆರಿಕದಲ್ಲಿರುವ ಕನ್ನಡತಿ ಡಾ.ಟಿ. ಅಕ್ಷತಾ ರಾಮಚಂದ್ರರಾವ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿಕ್ಕಮಗಳೂರು, ಮಹಾಬಲೇಶ್ವರ, ಮೈಸೂರು ಮತ್ತು ಬೆಂಗಳೂರಿನ ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ರೂಪಿಸಿದೆ. ಈ ಚಿತ್ರಕ್ಕೆ ಅರಿವುಪುಗಳ್ ಅವರ ಛಾಯಾಗ್ರಹಣ ಇದೆ.