ಮಳೆಯ ಕಾರ್ಮೋಡದ ನಡುವೆಯೂ ಚಿಣ್ಣರ ಕಲರವದಿಂದ ಕಳೆಗಟ್ಟಿದ್ದ ರಂಗೋಲಿ ಮೆಟ್ರೋ ಕಲಾಕೇಂದ್ರ ಪರಿಸರ ರಕ್ಷಣೆಯ ಮಹತ್ವ ಸಾರುತ್ತಿತ್ತು. ‘ನೀನೊಬ್ಬ ಬದಲಾದರೆ, ಜಗತ್ತಿನ ಒಬ್ಬ ಮೂರ್ಖ ಕಡಿಮೆಯಾಗುತ್ತಾನೆ’ ಎನ್ನುವುದನ್ನು ಮಕ್ಕಳು ಅಭಿನಯದ ಮೂಲಕ ಸಾದರ ಪಡಿಸುತ್ತಿದ್ದರೆ, ಮೂಕವಿಸ್ಮಿತರಾದ ವೀಕ್ಷಕರು ಮಕ್ಕಳ ಅಭಿನಯಕ್ಕೆ ತಲೆದೂಗಿದರು.