ಭರತಾನುನಾದ: ಮಂಜುಳಾ ಅಮ್ರೇಶ್ ಅವರಿಂದ ಗುರುವಾರ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.
ನಟುವಾಂಗದಲ್ಲಿ ಪ್ರಸನ್ನ ಕುಮಾರ್, ಬಾಲಸುಬ್ರಹ್ಮಣ್ಯ ಶರ್ಮ (ಗಾಯನ), ನಾರಾಯಣ ಸ್ವಾಮಿ (ಮೃದಂಗ), ವಯಲಿನ್ (ದಯಾಕರ್), ವಿವೇಕ್(ಕೊಳಲು) ಸಹಕರಿಸುವರು.
1992ರಲ್ಲಿ ಭರತನಾಟ್ಯ ರಂಗಪ್ರವೇಶ ಮಾಡಿದ್ದ ಮಂಜುಳಾ ಅವರು ಶ್ಯಾಮಲಾ ಮುರಳಿಕೃಷ್ಣ, ರೇವತಿ ನರಸಿಂಹನ್, ಭಾನುಮತಿ ಅವರ ಶಿಷ್ಯೆ. ದೇಶ ವಿದೇಶಗಳಲ್ಲಿ 250ಕ್ಕೂ ಅಧಿಕ ಪ್ರದರ್ಶನ ನೀಡಿರುವ ಮಂಜುಳಾ ಇಂದು ಭಾರತೀಯ ವಿದ್ಯಾಭವನದಲ್ಲಿ ಕಲಾರಸಿಕರನ್ನು ರಂಜಿಸಲಿದ್ದಾರೆ. ಸ್ಥಳ: ಭಾರತೀಯ ವಿದ್ಯಾಭವನ, ರೇಸ್ಕೋರ್ಸ್ ರಸ್ತೆ. ಸಂಜೆ 7.