<p>ಪ್ರದರ್ಶಕ ಹಾಗೂ ಆತ್ಮರಕ್ಷಣಾ ಕಲೆ ಕರಾಟೆಯಲ್ಲಿ ಪರಿಣತಿ ಹೊಂದುವ ಮಾರ್ಗದಲ್ಲಿಯೇ ಕಲಿತಿದ್ದು ಮರ್ಮಕಲೆ. ಅತಿ ಕ್ಲಿಷ್ಟವಾದ ಈ ವಿದ್ಯೆಯನ್ನು ನಿರಂತರವಾಗಿ ಅಭ್ಯಾಸ ಮಾಡುವ ಮೂಲಕವೇ ಸಿದ್ಧಿಸಿಕೊಂಡ ಸುರೇಶ್ ಎಸ್. ರಾವ್ ಸಾವಿರಾರು ಜನರ ನೋವು ನಿವಾರಣೆ ಮಾಡುವ ಮೂಲಕ `ಕರಾಟೆ ಮಾಸ್ಟರ್~ ಆಗಿದ್ದವರು `ಮರ್ಮ ಮಾಸ್ಟರ್~ ಎನಿಸಿಕೊಂಡಿದ್ದಾರೆ.<br /> <br /> ಉದ್ಯಾನನಗರಿಯಲ್ಲಿ ಮರ್ಮ ಚಿಕಿತ್ಸಾ ಕೇಂದ್ರವನ್ನು ನಡೆಸುತ್ತಿರುವ ಇವರು ಕಲಿತ ವಿದ್ಯೆಯನ್ನು ಹಂಚಿಕೊಳ್ಳುವಲ್ಲಿ ಸಂತಸ ಕಂಡಿರುವ ವ್ಯಕ್ತಿ. ಆದ್ದರಿಂದಲೇ ಚಿಕಿತ್ಸೆಯ ತಂತ್ರವನ್ನು ಹೇಳಿಕೊಟ್ಟು ದೊಡ್ಡ ಶಿಷ್ಯವೃಂದವನ್ನೇ ಸಜ್ಜುಗೊಳಿಸಿದ್ದಾರೆ.<br /> <br /> ಆದರೆ ಯಾರೇ ತಮ್ಮಲ್ಲಿ ನೋವು ಎಂದು ಬಂದರೂ ಮೊದಲು ಸಮಸ್ಯೆ ಇರುವವರ ದೇಹದ ಶಕ್ತಿ ಕೇಂದ್ರದ ನಾಡಿ ಹಿಡಿದು ನೋಡುವುದನ್ನು ಮಾತ್ರ ತಪ್ಪಿಸುವುದಿಲ್ಲ. ನಂತರ ಅವರು ಹೇಳಿದಂತೆ `ಮರ್ಮ ಚಿಕಿತ್ಸಾ~ ಶಿಷ್ಯವೃಂದ ಪಟ್ಟಿ ಅಂಟಿಸುವ ಹಾಗೂ ಮಸಾಜ್ ಮಾಡುವ ಹಲವು ಸೂತ್ರಗಳ ಪಾಲನೆ ಮಾಡುತ್ತದೆ. <br /> <br /> ಈ `ಮರ್ಮ ಚಿಕಿತ್ಸೆ~ ಪುರಾತನ ವಿದ್ಯೆ. ಆದರೆ ಪ್ರಭಾವಿಯಾಗಿ ಅದನ್ನು ಅರಿತವರು ಈಗ ಬಹಳ ಕಡಿಮೆ. `ಇದು ವೈದ್ಯವೃತ್ತಿ ಅಲ್ಲ ಪ್ರಕೃತಿ ಚಿಕಿತ್ಸೆ~ ಎಂದು ಸ್ಪಷ್ಟ ಪಡಿಸುತ್ತಾರೆ. <br /> ಔಷಧಿಗಳ ಮೊರೆ ಹೋಗದೆಯೇ ನೀಡುವ ಸಹಜವಾದ ಗುಣಕಾರಿ ಮಾರ್ಗವೇ ಮರ್ಮ ಚಿಕಿತ್ಸೆ. ಇಲ್ಲಿ ಬಳಕೆ ಆಗುವ ಮೂಲ ಸಾಧನವೆಂದರೆ ಅದು ಚಿಕಿತ್ಸಕನ ಕೈ. `ವರ್ಮಕಲಾ~, `ತಿರುಮ್ಮು~ ಇಲ್ಲವೆ `ತಿರುಮ್ಮಲ~ ಎಂದು ಕೂಡ ಈ ಚಿಕಿತ್ಸಾ ಮಾರ್ಗವನ್ನು ಕರೆಯಲಾಗುತ್ತದೆ. <br /> <br /> ದೇಹದಲ್ಲಿನ ಶಕ್ತಿ ಪ್ರವಾಹದ ಮಾರ್ಗಗಳು ತೊಡಕು ಮುಕ್ತವಾಗುವಂತೆ ಮಾಡುವುದು. ವಾತದಿಂದಾಗುವ ಸಮಸ್ಯೆಗಳನ್ನು ಪರಿಹರಿಸುವುದು. ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕವಾಗಿ ಉತ್ಸಾಹಿತರಾಗುವಂತೆ ಮಾಡುವುದೇ ಮರ್ಮ ಚಿಕಿತ್ಸೆಯಾಗಿದೆ. <br /> <br /> <strong>`ಲಾ ಆಫ್ ಹಿಟ್ಟಿಂಗ್~ನಿಂದ `ಲಾ ಆಫ್ ಟ್ರೀಟಿಂಗ್~:<br /> </strong>ದೇಹದ ಮರ್ಮ ಕೇಂದ್ರಗಳ ಮೇಲೆ ಪ್ರಹಾರ ನಡೆಸುವ ಯುದ್ಧ ಕಲೆಯನ್ನು `ಲಾ ಆಫ್ ಹಿಟ್ಟಿಂಗ್~ ಎಂದು ಆಂಗ್ಲ ಭಾಷೆಯಲ್ಲಿ ಕರೆಯಲಾಗುತ್ತದೆ. ಆದರೆ ಇದು ಕಾದಾಟಕ್ಕೆ ಮಾತ್ರ ಎನ್ನುವ ಭಾವನೆ ತಪ್ಪು. ಅದನ್ನು ದೈಹಿಕ ನೋವು ನಿವಾರಣೆಗೂ ಪ್ರಯೋಗಿಸಬಹುದು. `ಮಾಸ್ಟರ್ ಸುರೇಶ್~ ಮಾರ್ಗದರ್ಶನದಲ್ಲಿ ತಾರಾಕುಮಾರಿ ಎಂ.ಎಲ್., ರೇಣು ಪ್ರಸಾದ್, ಚಂದ್ರು ಯಾದವ್, ಸುರೇಶ್, ಸಂತೋಷ್, ಕಾರ್ತಿಕ್ ಹಾಗೂ ಭರತ್ ಅವರೂ ಈ ವಿದ್ಯೆ ಕಲಿಯುತ್ತಿದ್ದಾರೆ.<br /> <br /> <strong>ಬೆನ್ನು ನೋವೆನ್ನುವವರೇ ಹೆಚ್ಚು:<br /> </strong>ಮರ್ಮ ಹೀಲಿಂಗ್ ಕೇಂದ್ರಕ್ಕೆ ಬರುವ ಹೆಚ್ಚಿನವರ ಸಮಸ್ಯೆಯೆಂದರೆ `ಸೊಂಟ ಹಾಗೂ ಮಂಡಿ ನೋವು~. ಯುವಕರು ಕೂಡ ಈ ಸಮಸ್ಯೆಗೆ ಪರಿಹಾರ ಕೇಳುತ್ತಾರೆ. ಅರವತ್ತು ದಾಟಿದವರಲ್ಲಿ ಬಹಳಷ್ಟು ಮಂದಿ ಮೊಣಕಾಲು ಸೆಳೆಯುತ್ತದೆ, ಕಾಲು ಎತ್ತಿಡಲು ಆಗುವುದಿಲ್ಲ ಎನ್ನುತ್ತಾರೆ. ಕೆಲವರಂತೂ `ನೋವು-ಸೆಳೆತ ಸಹಿಸಲಾಗದು~ ಎಂದು ಕಣ್ಣೀರಿಡುತ್ತಾರೆ.<br /> <strong><br /> ಸಾಫ್ಟ್ವೇರ್ ಜನರ ಸಮಸ್ಯೆ:</strong><br /> ಶನಿವಾರ ಹಾಗೂ ಭಾನುವಾರ ಬಂತೆಂದರೆ ಮಾಸ್ಟರ್ ಮುಂದೆ ಸಾಫ್ಟ್ವೇರ್ ಕ್ಷೇತ್ರದವರ ದೊಡ್ಡ ದಂಡೇ ಇರುತ್ತದೆ. ಹೆಚ್ಚಿನವರ ಗೋಳು ಒಂದೇ `ಬೆನ್ನು ನೋವು...ಬೆನ್ನು ನೋವು...~. ಕಂಪ್ಯೂಟರ್ ಎದುರು ಒಂದೇ ಭಂಗಿಯಲ್ಲಿ ಕೂರುವುದರಿಂದ ಬೆನ್ನಿನಲ್ಲಿನ ಶಕ್ತಿ ಪ್ರವಾಹ ಕೇಂದ್ರಗಳು ಬ್ಲಾಕ್ ಆಗುತ್ತವೆ.<br /> <br /> ಸಹಜವಾಗಿಯೇ ಬೆನ್ನು ನೋವು. ಇನ್ನು ಕೆಲವರು ಮೌಸ್ ಹಿಡಿದು ನಿರಂತರವಾಗಿ ಕೆಲಸ ಮಾಡುವುದರಿಂದ ಕೈ ಊದಿಕೊಳ್ಳುತ್ತದೆಂದು ಕೂಡ ಹೇಳಿಕೊಳ್ಳುತ್ತಾರೆ. ಅಂಥವರಿಗೆ ಈ `ಮಾಸ್ಟರ್~ ನೀಡುವ ಸರಳವಾದ ಚಿಕಿತ್ಸೆ ಪರಿಣಾಮಕಾರಿ. <br /> <strong><br /> ದೇಹದ ನೂರೆಂಟು ಮರ್ಮ ಕೇಂದ್ರಗಳು:</strong><br /> ಪ್ರತಿಯೊಬ್ಬರಲ್ಲಿಯೂ 108 ಮರ್ಮ ಕೇಂದ್ರಗಳು ಅಂದರೆ `ಎನರ್ಜಿ ಪಾಯಿಂಟ್ಸ್~ ಇವೆ. ಅಲ್ಲಿಂದಲೇ ದೇಹದ ಪ್ರತಿಯೊಂದು ಅಂಗವು ಸುಗಮವಾಗಿ ಕಾರ್ಯನಿರ್ವಹಿಸುವಂಥ ಶಕ್ತಿ ಉತ್ಪನ್ನ ಆಗುತ್ತದೆ. ಶಕ್ತಿ ಪ್ರವಾಹಕ್ಕೆ ತೊಡಕಾಗುವ ಕೇಂದ್ರಗಳು ದೈಹಿಕ ಸಮಸ್ಯೆಗೆ ಕಾರಣವಾಗುತ್ತವೆ. <br /> <br /> ಈ ತೊಡಕು ನಿವಾರಣೆಯೇ ಚಿಕಿತ್ಸೆ. ಈ ಹನ್ನೆರಡು ಕೇಂದ್ರಗಳು ಮಾತ್ರ ಹೆಚ್ಚು ಸಂಕೀರ್ಣವಾದವು. ಇಂಥ ಭಾಗದಲ್ಲಿ ಉಂಟಾಗುವ ಸಮಸ್ಯೆ ಸಾವಿಗೂ ಕಾರಣವಾಗಬಹುದು. <br /> <br /> ಯುದ್ಧ ಕಲೆಯಲ್ಲಿ ಈ ಸೂಕ್ಷ್ಮ ಕೇಂದ್ರಗಳ ಮೇಲೆ ಪ್ರಹಾರ ನಡೆಸುವ ತಂತ್ರವನ್ನು ಹೇಳಿಕೊಡಲಾಗುತಿತ್ತು. ಕಮಲ್ ಹಾಸನ್ ಅವರ `ಇಂಡಿಯನ್~ ಸಿನಿಮಾದಲ್ಲಿ ಈ ಕಲೆಯು ಎಷ್ಟೊಂದು ಪರಿಣಾಮಕಾರಿ ಎನ್ನುವುದನ್ನು ತೋರಿಸಲಾಗಿತ್ತು. ಆದ್ದರಿಂದಲೇ ಈ ಹನ್ನೆರಡು ಕೇಂದ್ರಗಳನ್ನು `ಪಡುಮರ್ಮ~ ಎಂದು ಕರೆಯಲಾಗುತ್ತದೆ. ಬಾಕಿಯವು `ತೋಡು ಮರ್ಮ~ ಆಗಿವೆ.<br /> <br /> <strong>ಮೂಲ ನೆಲೆಯಿಂದ ವಿಶ್ವಕ್ಕೆ...!:<br /> </strong>ಮರ್ಮ ಚಿಕಿತ್ಸೆಯ ಮೂಲ ನೆಲೆ ಭಾರತ. ಸುಮಾರು ಐದು ಸಾವಿರ ವರ್ಷಗಳ ಹಿಂದೆಯೇ ಈ ಚಿಕಿತ್ಸಾ ತಂತ್ರವು ಬಳಕೆಯಲ್ಲಿತ್ತು ಎಂದು ನಂಬಲಾಗಿದೆ. ಕೇರಳದ `ಕಳರಿಪಯಟ್ಟು~ ಪ್ರದರ್ಶಕ ಕಲೆಯೇ ವಿಧಾನದ ಮೂಲ. ಬೌದ್ಧ ಧರ್ಮದೊಂದಿಗೆ ಚೀನಾಕ್ಕೂ ಹರಡಿತು. ಮಾಸ್ಟರ್ ಸುರೇಶ್ ಅವರಲ್ಲಿಯೂ ದೇಶಿಯರು ಮಾತ್ರವಲ್ಲ ವಿದೇಶಿಯರೂ ಬಂದು ತಮ್ಮ ದೈಹಿಕ ನೋವಿಗೆ ಪರಿಹಾರ ಕಂಡುಕೊಂಡಿದ್ದಾರೆ. <br /> <br /> <strong>ಯಾವ ಸಮಸ್ಯೆಗಳಿಗೆ ಚಿಕಿತ್ಸೆ?<br /> </strong>* ಸ್ನಾಯು ಮತ್ತು ಸಂಧಿ ನೋವು<br /> * ಸಂಧಿ ಬಿಗಿತ ಹಾಗೂ ಊತ<br /> * ಸ್ನಾಯು ಸೆಳೆತ<br /> * ಉಸಿರಾಟದ ತೊಂದರೆ<br /> * ಪಚನ ಕ್ರಿಯೆ ಸಮಸ್ಯೆಗಳು<br /> * ನರದೌರ್ಬಲ್ಯ<br /> * ನಿರಂತರ ತಲೆನೋವು<br /> * ಇಳಿವಯಸ್ಸಿನ ಸಮಸ್ಯೆಗಳು<br /> * ಗ್ರಂಥಿ ಸೋಂಕು<br /> * ಮಾನಸಿಕ ಸಮಸ್ಯೆ, ಒತ್ತಡ<br /> * ಸ್ನಾಯು ಶಕ್ತಿ ಕುಂದುವಿಕೆ<br /> <br /> <br /> `ಮರ್ಮ ಕಲೆಯನ್ನು ಓದಿ ಕಲಿಯುವುದು ಖಂಡಿತ ಸಾಧ್ಯವಿಲ್ಲ. ಗುರುವಿನ ಮಾರ್ಗದರ್ಶನದಲ್ಲಿ ನಿರಂತರ ಅಭ್ಯಾಸ ಮಾಡಿಯೇ ಕರಗತ ಮಾಡಿಕೊಳ್ಳಬೇಕು. ಅರಿಯದೇ ಈ ತಂತ್ರದಿಂದ ಚಿಕಿತ್ಸೆ ಮಾಡುವ ಸಾಹಸಕ್ಕೆ ಕೈಹಾಕಿ ತಪ್ಪು ಶಕ್ತಿ ಕೇಂದ್ರದ ಮೇಲೆ ಒತ್ತಡ ಹೆಚ್ಚಿಸಿದರೆ ಪ್ರಾಣಾಪಾಯ~ <br /> <strong>-ಮಾಸ್ಟರ್ ಸುರೇಶ್ ಎಸ್. ರಾವ್<br /> <br /> </strong><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರದರ್ಶಕ ಹಾಗೂ ಆತ್ಮರಕ್ಷಣಾ ಕಲೆ ಕರಾಟೆಯಲ್ಲಿ ಪರಿಣತಿ ಹೊಂದುವ ಮಾರ್ಗದಲ್ಲಿಯೇ ಕಲಿತಿದ್ದು ಮರ್ಮಕಲೆ. ಅತಿ ಕ್ಲಿಷ್ಟವಾದ ಈ ವಿದ್ಯೆಯನ್ನು ನಿರಂತರವಾಗಿ ಅಭ್ಯಾಸ ಮಾಡುವ ಮೂಲಕವೇ ಸಿದ್ಧಿಸಿಕೊಂಡ ಸುರೇಶ್ ಎಸ್. ರಾವ್ ಸಾವಿರಾರು ಜನರ ನೋವು ನಿವಾರಣೆ ಮಾಡುವ ಮೂಲಕ `ಕರಾಟೆ ಮಾಸ್ಟರ್~ ಆಗಿದ್ದವರು `ಮರ್ಮ ಮಾಸ್ಟರ್~ ಎನಿಸಿಕೊಂಡಿದ್ದಾರೆ.<br /> <br /> ಉದ್ಯಾನನಗರಿಯಲ್ಲಿ ಮರ್ಮ ಚಿಕಿತ್ಸಾ ಕೇಂದ್ರವನ್ನು ನಡೆಸುತ್ತಿರುವ ಇವರು ಕಲಿತ ವಿದ್ಯೆಯನ್ನು ಹಂಚಿಕೊಳ್ಳುವಲ್ಲಿ ಸಂತಸ ಕಂಡಿರುವ ವ್ಯಕ್ತಿ. ಆದ್ದರಿಂದಲೇ ಚಿಕಿತ್ಸೆಯ ತಂತ್ರವನ್ನು ಹೇಳಿಕೊಟ್ಟು ದೊಡ್ಡ ಶಿಷ್ಯವೃಂದವನ್ನೇ ಸಜ್ಜುಗೊಳಿಸಿದ್ದಾರೆ.<br /> <br /> ಆದರೆ ಯಾರೇ ತಮ್ಮಲ್ಲಿ ನೋವು ಎಂದು ಬಂದರೂ ಮೊದಲು ಸಮಸ್ಯೆ ಇರುವವರ ದೇಹದ ಶಕ್ತಿ ಕೇಂದ್ರದ ನಾಡಿ ಹಿಡಿದು ನೋಡುವುದನ್ನು ಮಾತ್ರ ತಪ್ಪಿಸುವುದಿಲ್ಲ. ನಂತರ ಅವರು ಹೇಳಿದಂತೆ `ಮರ್ಮ ಚಿಕಿತ್ಸಾ~ ಶಿಷ್ಯವೃಂದ ಪಟ್ಟಿ ಅಂಟಿಸುವ ಹಾಗೂ ಮಸಾಜ್ ಮಾಡುವ ಹಲವು ಸೂತ್ರಗಳ ಪಾಲನೆ ಮಾಡುತ್ತದೆ. <br /> <br /> ಈ `ಮರ್ಮ ಚಿಕಿತ್ಸೆ~ ಪುರಾತನ ವಿದ್ಯೆ. ಆದರೆ ಪ್ರಭಾವಿಯಾಗಿ ಅದನ್ನು ಅರಿತವರು ಈಗ ಬಹಳ ಕಡಿಮೆ. `ಇದು ವೈದ್ಯವೃತ್ತಿ ಅಲ್ಲ ಪ್ರಕೃತಿ ಚಿಕಿತ್ಸೆ~ ಎಂದು ಸ್ಪಷ್ಟ ಪಡಿಸುತ್ತಾರೆ. <br /> ಔಷಧಿಗಳ ಮೊರೆ ಹೋಗದೆಯೇ ನೀಡುವ ಸಹಜವಾದ ಗುಣಕಾರಿ ಮಾರ್ಗವೇ ಮರ್ಮ ಚಿಕಿತ್ಸೆ. ಇಲ್ಲಿ ಬಳಕೆ ಆಗುವ ಮೂಲ ಸಾಧನವೆಂದರೆ ಅದು ಚಿಕಿತ್ಸಕನ ಕೈ. `ವರ್ಮಕಲಾ~, `ತಿರುಮ್ಮು~ ಇಲ್ಲವೆ `ತಿರುಮ್ಮಲ~ ಎಂದು ಕೂಡ ಈ ಚಿಕಿತ್ಸಾ ಮಾರ್ಗವನ್ನು ಕರೆಯಲಾಗುತ್ತದೆ. <br /> <br /> ದೇಹದಲ್ಲಿನ ಶಕ್ತಿ ಪ್ರವಾಹದ ಮಾರ್ಗಗಳು ತೊಡಕು ಮುಕ್ತವಾಗುವಂತೆ ಮಾಡುವುದು. ವಾತದಿಂದಾಗುವ ಸಮಸ್ಯೆಗಳನ್ನು ಪರಿಹರಿಸುವುದು. ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕವಾಗಿ ಉತ್ಸಾಹಿತರಾಗುವಂತೆ ಮಾಡುವುದೇ ಮರ್ಮ ಚಿಕಿತ್ಸೆಯಾಗಿದೆ. <br /> <br /> <strong>`ಲಾ ಆಫ್ ಹಿಟ್ಟಿಂಗ್~ನಿಂದ `ಲಾ ಆಫ್ ಟ್ರೀಟಿಂಗ್~:<br /> </strong>ದೇಹದ ಮರ್ಮ ಕೇಂದ್ರಗಳ ಮೇಲೆ ಪ್ರಹಾರ ನಡೆಸುವ ಯುದ್ಧ ಕಲೆಯನ್ನು `ಲಾ ಆಫ್ ಹಿಟ್ಟಿಂಗ್~ ಎಂದು ಆಂಗ್ಲ ಭಾಷೆಯಲ್ಲಿ ಕರೆಯಲಾಗುತ್ತದೆ. ಆದರೆ ಇದು ಕಾದಾಟಕ್ಕೆ ಮಾತ್ರ ಎನ್ನುವ ಭಾವನೆ ತಪ್ಪು. ಅದನ್ನು ದೈಹಿಕ ನೋವು ನಿವಾರಣೆಗೂ ಪ್ರಯೋಗಿಸಬಹುದು. `ಮಾಸ್ಟರ್ ಸುರೇಶ್~ ಮಾರ್ಗದರ್ಶನದಲ್ಲಿ ತಾರಾಕುಮಾರಿ ಎಂ.ಎಲ್., ರೇಣು ಪ್ರಸಾದ್, ಚಂದ್ರು ಯಾದವ್, ಸುರೇಶ್, ಸಂತೋಷ್, ಕಾರ್ತಿಕ್ ಹಾಗೂ ಭರತ್ ಅವರೂ ಈ ವಿದ್ಯೆ ಕಲಿಯುತ್ತಿದ್ದಾರೆ.<br /> <br /> <strong>ಬೆನ್ನು ನೋವೆನ್ನುವವರೇ ಹೆಚ್ಚು:<br /> </strong>ಮರ್ಮ ಹೀಲಿಂಗ್ ಕೇಂದ್ರಕ್ಕೆ ಬರುವ ಹೆಚ್ಚಿನವರ ಸಮಸ್ಯೆಯೆಂದರೆ `ಸೊಂಟ ಹಾಗೂ ಮಂಡಿ ನೋವು~. ಯುವಕರು ಕೂಡ ಈ ಸಮಸ್ಯೆಗೆ ಪರಿಹಾರ ಕೇಳುತ್ತಾರೆ. ಅರವತ್ತು ದಾಟಿದವರಲ್ಲಿ ಬಹಳಷ್ಟು ಮಂದಿ ಮೊಣಕಾಲು ಸೆಳೆಯುತ್ತದೆ, ಕಾಲು ಎತ್ತಿಡಲು ಆಗುವುದಿಲ್ಲ ಎನ್ನುತ್ತಾರೆ. ಕೆಲವರಂತೂ `ನೋವು-ಸೆಳೆತ ಸಹಿಸಲಾಗದು~ ಎಂದು ಕಣ್ಣೀರಿಡುತ್ತಾರೆ.<br /> <strong><br /> ಸಾಫ್ಟ್ವೇರ್ ಜನರ ಸಮಸ್ಯೆ:</strong><br /> ಶನಿವಾರ ಹಾಗೂ ಭಾನುವಾರ ಬಂತೆಂದರೆ ಮಾಸ್ಟರ್ ಮುಂದೆ ಸಾಫ್ಟ್ವೇರ್ ಕ್ಷೇತ್ರದವರ ದೊಡ್ಡ ದಂಡೇ ಇರುತ್ತದೆ. ಹೆಚ್ಚಿನವರ ಗೋಳು ಒಂದೇ `ಬೆನ್ನು ನೋವು...ಬೆನ್ನು ನೋವು...~. ಕಂಪ್ಯೂಟರ್ ಎದುರು ಒಂದೇ ಭಂಗಿಯಲ್ಲಿ ಕೂರುವುದರಿಂದ ಬೆನ್ನಿನಲ್ಲಿನ ಶಕ್ತಿ ಪ್ರವಾಹ ಕೇಂದ್ರಗಳು ಬ್ಲಾಕ್ ಆಗುತ್ತವೆ.<br /> <br /> ಸಹಜವಾಗಿಯೇ ಬೆನ್ನು ನೋವು. ಇನ್ನು ಕೆಲವರು ಮೌಸ್ ಹಿಡಿದು ನಿರಂತರವಾಗಿ ಕೆಲಸ ಮಾಡುವುದರಿಂದ ಕೈ ಊದಿಕೊಳ್ಳುತ್ತದೆಂದು ಕೂಡ ಹೇಳಿಕೊಳ್ಳುತ್ತಾರೆ. ಅಂಥವರಿಗೆ ಈ `ಮಾಸ್ಟರ್~ ನೀಡುವ ಸರಳವಾದ ಚಿಕಿತ್ಸೆ ಪರಿಣಾಮಕಾರಿ. <br /> <strong><br /> ದೇಹದ ನೂರೆಂಟು ಮರ್ಮ ಕೇಂದ್ರಗಳು:</strong><br /> ಪ್ರತಿಯೊಬ್ಬರಲ್ಲಿಯೂ 108 ಮರ್ಮ ಕೇಂದ್ರಗಳು ಅಂದರೆ `ಎನರ್ಜಿ ಪಾಯಿಂಟ್ಸ್~ ಇವೆ. ಅಲ್ಲಿಂದಲೇ ದೇಹದ ಪ್ರತಿಯೊಂದು ಅಂಗವು ಸುಗಮವಾಗಿ ಕಾರ್ಯನಿರ್ವಹಿಸುವಂಥ ಶಕ್ತಿ ಉತ್ಪನ್ನ ಆಗುತ್ತದೆ. ಶಕ್ತಿ ಪ್ರವಾಹಕ್ಕೆ ತೊಡಕಾಗುವ ಕೇಂದ್ರಗಳು ದೈಹಿಕ ಸಮಸ್ಯೆಗೆ ಕಾರಣವಾಗುತ್ತವೆ. <br /> <br /> ಈ ತೊಡಕು ನಿವಾರಣೆಯೇ ಚಿಕಿತ್ಸೆ. ಈ ಹನ್ನೆರಡು ಕೇಂದ್ರಗಳು ಮಾತ್ರ ಹೆಚ್ಚು ಸಂಕೀರ್ಣವಾದವು. ಇಂಥ ಭಾಗದಲ್ಲಿ ಉಂಟಾಗುವ ಸಮಸ್ಯೆ ಸಾವಿಗೂ ಕಾರಣವಾಗಬಹುದು. <br /> <br /> ಯುದ್ಧ ಕಲೆಯಲ್ಲಿ ಈ ಸೂಕ್ಷ್ಮ ಕೇಂದ್ರಗಳ ಮೇಲೆ ಪ್ರಹಾರ ನಡೆಸುವ ತಂತ್ರವನ್ನು ಹೇಳಿಕೊಡಲಾಗುತಿತ್ತು. ಕಮಲ್ ಹಾಸನ್ ಅವರ `ಇಂಡಿಯನ್~ ಸಿನಿಮಾದಲ್ಲಿ ಈ ಕಲೆಯು ಎಷ್ಟೊಂದು ಪರಿಣಾಮಕಾರಿ ಎನ್ನುವುದನ್ನು ತೋರಿಸಲಾಗಿತ್ತು. ಆದ್ದರಿಂದಲೇ ಈ ಹನ್ನೆರಡು ಕೇಂದ್ರಗಳನ್ನು `ಪಡುಮರ್ಮ~ ಎಂದು ಕರೆಯಲಾಗುತ್ತದೆ. ಬಾಕಿಯವು `ತೋಡು ಮರ್ಮ~ ಆಗಿವೆ.<br /> <br /> <strong>ಮೂಲ ನೆಲೆಯಿಂದ ವಿಶ್ವಕ್ಕೆ...!:<br /> </strong>ಮರ್ಮ ಚಿಕಿತ್ಸೆಯ ಮೂಲ ನೆಲೆ ಭಾರತ. ಸುಮಾರು ಐದು ಸಾವಿರ ವರ್ಷಗಳ ಹಿಂದೆಯೇ ಈ ಚಿಕಿತ್ಸಾ ತಂತ್ರವು ಬಳಕೆಯಲ್ಲಿತ್ತು ಎಂದು ನಂಬಲಾಗಿದೆ. ಕೇರಳದ `ಕಳರಿಪಯಟ್ಟು~ ಪ್ರದರ್ಶಕ ಕಲೆಯೇ ವಿಧಾನದ ಮೂಲ. ಬೌದ್ಧ ಧರ್ಮದೊಂದಿಗೆ ಚೀನಾಕ್ಕೂ ಹರಡಿತು. ಮಾಸ್ಟರ್ ಸುರೇಶ್ ಅವರಲ್ಲಿಯೂ ದೇಶಿಯರು ಮಾತ್ರವಲ್ಲ ವಿದೇಶಿಯರೂ ಬಂದು ತಮ್ಮ ದೈಹಿಕ ನೋವಿಗೆ ಪರಿಹಾರ ಕಂಡುಕೊಂಡಿದ್ದಾರೆ. <br /> <br /> <strong>ಯಾವ ಸಮಸ್ಯೆಗಳಿಗೆ ಚಿಕಿತ್ಸೆ?<br /> </strong>* ಸ್ನಾಯು ಮತ್ತು ಸಂಧಿ ನೋವು<br /> * ಸಂಧಿ ಬಿಗಿತ ಹಾಗೂ ಊತ<br /> * ಸ್ನಾಯು ಸೆಳೆತ<br /> * ಉಸಿರಾಟದ ತೊಂದರೆ<br /> * ಪಚನ ಕ್ರಿಯೆ ಸಮಸ್ಯೆಗಳು<br /> * ನರದೌರ್ಬಲ್ಯ<br /> * ನಿರಂತರ ತಲೆನೋವು<br /> * ಇಳಿವಯಸ್ಸಿನ ಸಮಸ್ಯೆಗಳು<br /> * ಗ್ರಂಥಿ ಸೋಂಕು<br /> * ಮಾನಸಿಕ ಸಮಸ್ಯೆ, ಒತ್ತಡ<br /> * ಸ್ನಾಯು ಶಕ್ತಿ ಕುಂದುವಿಕೆ<br /> <br /> <br /> `ಮರ್ಮ ಕಲೆಯನ್ನು ಓದಿ ಕಲಿಯುವುದು ಖಂಡಿತ ಸಾಧ್ಯವಿಲ್ಲ. ಗುರುವಿನ ಮಾರ್ಗದರ್ಶನದಲ್ಲಿ ನಿರಂತರ ಅಭ್ಯಾಸ ಮಾಡಿಯೇ ಕರಗತ ಮಾಡಿಕೊಳ್ಳಬೇಕು. ಅರಿಯದೇ ಈ ತಂತ್ರದಿಂದ ಚಿಕಿತ್ಸೆ ಮಾಡುವ ಸಾಹಸಕ್ಕೆ ಕೈಹಾಕಿ ತಪ್ಪು ಶಕ್ತಿ ಕೇಂದ್ರದ ಮೇಲೆ ಒತ್ತಡ ಹೆಚ್ಚಿಸಿದರೆ ಪ್ರಾಣಾಪಾಯ~ <br /> <strong>-ಮಾಸ್ಟರ್ ಸುರೇಶ್ ಎಸ್. ರಾವ್<br /> <br /> </strong><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>