<p><strong>ಸೃಷ್ಟಿ ಸಂಗಿತೋತ್ಸವ</strong><br /> ಸೃಷ್ಟಿ ಕಲಾ ವಿದ್ಯಾಲಯ: ಶನಿವಾರ ಸಂಸ್ಥೆಯ ದ್ವಿತೀಯ ವಾರ್ಷಿಕೋತ್ಸವ, ಸಂಗಿತೋತ್ಸವ ಮತ್ತು ಖ್ಯಾತ ತಬಲಾ ವಾದಕ ಪಂಡಿತ್ ಸತೀಶ್ ಹಂಪಿಹೊಳಿ ಅವರಿಗೆ ನಾದೋಪಾಸಕ ಪ್ರಶಸ್ತಿ ಪ್ರದಾನ. ಸೃಷ್ಟಿ ಕಲಾ ಶಾಲೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ.<br /> <br /> ತಬಲಾ ವಾದನದಿಂದ ಪಂಡಿತರೆನಿಸಿಕೊಳ್ಳಲು ಸ್ವರ ಸರಸ್ವತಿಯು ಅವರನ್ನು ಆಶೀರ್ವಾದ ಮಾಡಿದ್ದಾಳೆ ಎಂದೇ ಅರ್ಥ. ಅಲ್ಲದೆ ಸತತ ಪರಿಶ್ರಮವು ಪಾಂಡಿತ್ಯದ ಕುರುಹು. ವ್ಯಕ್ತಿಯು ಶಕ್ತಿಯಾಗಲು, ಅಭಿಮಾನಿಗಳ ಹನ್ಮನದಲ್ಲಿ ನೆಲೆನಿಂತು ಆರಾದನೆಗೆ ಪ್ರಿಯವಾಗಲು ಕಾರಣರಾಗುತ್ತಾರೆ. ಹೀಗೆ ಒಬ್ಬರು. <br /> <br /> ಸದಾ ಸಂಗೀತ ಕಾಯಕದಲ್ಲಿ ತೊಡಗಿಸಿಕೊಂಡವರು ನಾಡಿನ ಖ್ಯಾತ ತಬಲಾಪಟು ಪಂಡಿತ್ ಸತೀಶ್ ಹಂಪಿಹೊಳಿ. ಪಂಡಿತ್ ಎಂ.ಎನ್. ಕಸ್ತೂರಿ ಮತ್ತು ನಂತರ ದಿವಂಗತ ಪಂಡಿತ್ ಬಸವರಾಜ್ ಬೆಂಡಿಗೇರಿಯವರಲ್ಲಿ ತಬಲಾ ಅಭ್ಯಾಸ ಮಾಡಿದ್ದಾರೆ. ಸ್ನಾತಕೋತ್ತರ ವಿದ್ವತ್ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. <br /> <br /> ಅಖಿಲ ಭಾರತ ಗಂದರ್ವ ಮಹಾ ವಿದ್ಯಾಲಯದ ತಬಲಾ ವಿಶಾರದದಲ್ಲಿ ಉನ್ನತ ಶ್ರೇಣೆಯಲ್ಲಿ ತೇರ್ಗಡೆ ಹೊಂದಿದ್ದು, ಆಕಾಶವಾಣಿ ದೂರದರ್ಶನದ ಬಿ ಹೈ ದರ್ಜೆಯ ಕಲಾವಿದರಾಗಿದ್ದಾರೆ.<br /> <br /> ದೇಶ ವಿದೇಶಗಳಲ್ಲಿ ಕಾರ್ಯಕ್ರಮ ಕೊಟ್ಟ ಕೀರ್ತಿ ಇವರದ್ದು. ಬೆಂಗಳೂರು ಗಾಯನ ಸಮಾಜದ ಸಂಗೀತ ಸಮ್ಮೇಳನದಲ್ಲಿ ಉತ್ತಮ ತಬಲಾ ವಾದಕ, ತಬಲಾ ನಾದಸಾದಕ , ರಂಗ ಕಲಾಶ್ರೀ , ಅಜಂತಾ ಸ್ವರ್ಣ ದಂಪತಿ, ಸ್ವರ ಕಲಾ ಗೌರವ, ಪಂಚಮ ಸಂಗೀತ ಪ್ರತಿಷ್ಠಾನ ಸಂಸ್ಥೆಯ ಕಲಾ ಕೌಸ್ತುಭ ಹೀಗೆ ವಿವಿಧ ಪ್ರಶಸ್ತಿ ಸನ್ಮಾನಗಳಿಗೆ ಭಾಜನರಾಗಿದ್ದಾರೆ. <br /> <br /> ಉದ್ಘಾಟನೆ: ಕವಿ ಜಿ. ಎಸ್. ಶಿವರುದ್ರಪ್ಪ, ಅತಿಥಿಗಳು: ಡಾ. ನರಸಿಂಹಲು ವಡವಾಟಿ, ಪಂಡಿತ್ ಪರಮೇಶ್ವರ ಹೆಗಡೆ, ವೀಣಾ ರೈ, ಅಧ್ಯಕ್ಷತೆ: ಮಾಸ್ಟರ್ ಹಿರಣ್ಣಯ್ಯ. <br /> ಸ್ಥಳ: ಗಾಯನ ಸಮಾಜ, ಕೆ.ಆರ್. ರಸ್ತೆ. ಸಂಜೆ 4. <br /> <br /> <strong>ಮಾನಸಿ ರಾಗಮಾಲಿಕಾ</strong><br /> ಅನನ್ಯ: ಶನಿವಾರ ಗೀತ ಶಾಸ್ತ್ರ ಸಿಂಚನ ಸರಣಿಯಲ್ಲಿ `ರಾಗಮಾಲಿಕಾ~ ಸಂಯೋಜನೆ ಕುರಿತು ವಿದುಷಿ ಮಾನಸಿ ಪ್ರಸಾದ್ ಅವರಿಂದ ಸಂಗೀತ ಕಛೇರಿ. ನಳಿನಾ ಮೋಹನ್ (ವಯಲಿನ್), ಎನ್. ವಾಸುದೇವ (ಮೃದಂಗ) ಮತ್ತು ಭಾರದ್ವಾಜ್ ಸಾತವಳ್ಳಿ (ಮೋರ್ಚಿಂಗ್). ಸ್ಥಳ: ಅನನ್ಯ ಸಭಾಂಗಣ, 91/2, 4ನೇ ಮುಖ್ಯರಸ್ತೆ, ಮಲ್ಲೇಶ್ವರ. ಸಂಜೆ 6.30.</p>.<p><strong>ಕಲಾ ಪ್ರದರ್ಶನ<br /> </strong> ಸಾರಾ ಅರಕ್ಕಲ್ ಗ್ಯಾಲರಿ: ಕಲಾ ಗ್ಯಾಲರಿಯ 8ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಭಾನುವಾರ 45 ಸಮಕಾಲೀನ ಕಲಾವಿದರ ಕಲಾಕೃತಿಗಳ ಪ್ರದರ್ಶನ ಉದ್ಘಾಟನೆ. ನಂ. 156, 4ನೇ ಮುಖ್ಯರಸ್ತೆ, ಬಿಇಎಂಎಲ್ ಬಡಾವಣೆ, ಐಟಿಪಿಎಲ್ ರಸ್ತೆ. ಸಂಜೆ 6.30<br /> <br /> <strong>ಕಲಾ ದರ್ಶನ</strong><br /> ಖ್ಯಾತ ಕಲಾವಿದರಾದ ಕೈಲಾಸ್ ಅನ್ಯಾಲ್, ವಿಜಯಾ ರಾಜ್ ಬೋದಾನ್ಕರ್, ಸಂಗೀತ ಗದಾ ಮತ್ತು ಕಿಶೋರ್ ನಾದವ್ದೇಖರ್ ಅವರ ಅಪರೂಪದ ಕಲಾಕೃತಿಗಳು ಸೆ.15ರ ವರೆಗೆ ಪ್ರದರ್ಶನಗೊಳ್ಳಲಿವೆ. ಸ್ಥಳ: ಚಿತ್ರಕಲಾ ಪರಿಷತ್, ಬೆಳಿಗ್ಗೆ 10.30ರಿಂದ 7.30. <br /> <br /> <strong>ವಿಘ್ನರಾಜ ಸಂಗೀತ</strong><br /> ಸರಸ್ವತಿ ಗಾನ ಸಭಾ ಮತ್ತು ಶ್ರೀ ಗುರುವಾಯೂರಪ್ಪನ್ ಭಜನ್ ಸಮಾಜ ಟ್ರಸ್ಟ್: ಮಾಸಿಕ ಸಂಗೀತ ಕಛೇರಿ ಅಂಗವಾಗಿ ಭಾನುವಾರ ವಿಘ್ನರಾಜ, ಬಿ.ಕೆ. ರಘು ಮತ್ತು ಅರ್ಜುನ ಕುಮಾರ್ ಅವರಿಂದ ಸಂಗೀತ ಕಛೇರಿ.<br /> <br /> 1979ರಲ್ಲಿ ಹುಟ್ಟಿದ ವಿಘ್ನರಾಜ ಮೊದಲಿಗೆ ತಮ್ಮ ತಂದೆ ಸೂರ್ಯನಾರಾಯಣ ಭಟ್ ಅವರ ಬಳಿ ಸಂಗೀತದ ಓನಾಮ ಕಲಿತರು. ತಂದೆಯ ಶಿಷ್ಯ ಸುಬ್ರಹ್ಮಣ್ಯ ಭಟ್ ಅವರ ಬಳಿ ಸಂಗೀತಾಭ್ಯಾಸ ಮುಂದುವರಿಸಿದರು. 16 ವರ್ಷದವರಿದ್ದಾಗ ತಂದೆಯ ಜೊತೆ ಸಂಗೀತ ಕಛೇರಿ ನೀಡಲು ಆರಂಭಿಸಿದರು. <br /> <br /> ಮಧುರ ಕಂಠದಿಂದ ಖ್ಯಾತರಾಗಿರುವ ವಿಘ್ನರಾಜ ಕೊಳಲು ವಾದಕರೂ ಹೌದು. ದೇಶ, ವಿದೇಶದ ಹಲವು ವೇದಿಕೆಗಳಲ್ಲಿ ಸಂಗೀತ ಮತ್ತು ಕೊಳಲು ಕಛೇರಿ ನೀಡಿದ್ದಾರೆ. ಪ್ರಸ್ತುತ ಕ್ವಾಲಾಲಂಪುರದ `ಟೆಂಪಲ್ ಆಫ್ ಫೈನ್ ಆರ್ಟ್ಸ್ ಇಂಟರ್ನ್ಯಾಷನಲ್~ನಲ್ಲಿ ವಾದ್ಯ ವಿಭಾಗದ ಉಸ್ತುವಾರಿ ಹೊತ್ತಿದ್ದಾರೆ.<br /> <br /> ಸ್ಥಳ: ಉನ್ನತಿ ಕೇಂದ್ರ, ನಂ 1, ಗಣೇಶ ಟೆಂಪಲ್ ರಸ್ತೆ, ಎನ್ಜಿಇಎಫ್ ಬಡಾವಣೆ, ಸದಾನಂದ ನಗರ. ಬೆಳಿಗ್ಗೆ 10.30.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೃಷ್ಟಿ ಸಂಗಿತೋತ್ಸವ</strong><br /> ಸೃಷ್ಟಿ ಕಲಾ ವಿದ್ಯಾಲಯ: ಶನಿವಾರ ಸಂಸ್ಥೆಯ ದ್ವಿತೀಯ ವಾರ್ಷಿಕೋತ್ಸವ, ಸಂಗಿತೋತ್ಸವ ಮತ್ತು ಖ್ಯಾತ ತಬಲಾ ವಾದಕ ಪಂಡಿತ್ ಸತೀಶ್ ಹಂಪಿಹೊಳಿ ಅವರಿಗೆ ನಾದೋಪಾಸಕ ಪ್ರಶಸ್ತಿ ಪ್ರದಾನ. ಸೃಷ್ಟಿ ಕಲಾ ಶಾಲೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ.<br /> <br /> ತಬಲಾ ವಾದನದಿಂದ ಪಂಡಿತರೆನಿಸಿಕೊಳ್ಳಲು ಸ್ವರ ಸರಸ್ವತಿಯು ಅವರನ್ನು ಆಶೀರ್ವಾದ ಮಾಡಿದ್ದಾಳೆ ಎಂದೇ ಅರ್ಥ. ಅಲ್ಲದೆ ಸತತ ಪರಿಶ್ರಮವು ಪಾಂಡಿತ್ಯದ ಕುರುಹು. ವ್ಯಕ್ತಿಯು ಶಕ್ತಿಯಾಗಲು, ಅಭಿಮಾನಿಗಳ ಹನ್ಮನದಲ್ಲಿ ನೆಲೆನಿಂತು ಆರಾದನೆಗೆ ಪ್ರಿಯವಾಗಲು ಕಾರಣರಾಗುತ್ತಾರೆ. ಹೀಗೆ ಒಬ್ಬರು. <br /> <br /> ಸದಾ ಸಂಗೀತ ಕಾಯಕದಲ್ಲಿ ತೊಡಗಿಸಿಕೊಂಡವರು ನಾಡಿನ ಖ್ಯಾತ ತಬಲಾಪಟು ಪಂಡಿತ್ ಸತೀಶ್ ಹಂಪಿಹೊಳಿ. ಪಂಡಿತ್ ಎಂ.ಎನ್. ಕಸ್ತೂರಿ ಮತ್ತು ನಂತರ ದಿವಂಗತ ಪಂಡಿತ್ ಬಸವರಾಜ್ ಬೆಂಡಿಗೇರಿಯವರಲ್ಲಿ ತಬಲಾ ಅಭ್ಯಾಸ ಮಾಡಿದ್ದಾರೆ. ಸ್ನಾತಕೋತ್ತರ ವಿದ್ವತ್ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. <br /> <br /> ಅಖಿಲ ಭಾರತ ಗಂದರ್ವ ಮಹಾ ವಿದ್ಯಾಲಯದ ತಬಲಾ ವಿಶಾರದದಲ್ಲಿ ಉನ್ನತ ಶ್ರೇಣೆಯಲ್ಲಿ ತೇರ್ಗಡೆ ಹೊಂದಿದ್ದು, ಆಕಾಶವಾಣಿ ದೂರದರ್ಶನದ ಬಿ ಹೈ ದರ್ಜೆಯ ಕಲಾವಿದರಾಗಿದ್ದಾರೆ.<br /> <br /> ದೇಶ ವಿದೇಶಗಳಲ್ಲಿ ಕಾರ್ಯಕ್ರಮ ಕೊಟ್ಟ ಕೀರ್ತಿ ಇವರದ್ದು. ಬೆಂಗಳೂರು ಗಾಯನ ಸಮಾಜದ ಸಂಗೀತ ಸಮ್ಮೇಳನದಲ್ಲಿ ಉತ್ತಮ ತಬಲಾ ವಾದಕ, ತಬಲಾ ನಾದಸಾದಕ , ರಂಗ ಕಲಾಶ್ರೀ , ಅಜಂತಾ ಸ್ವರ್ಣ ದಂಪತಿ, ಸ್ವರ ಕಲಾ ಗೌರವ, ಪಂಚಮ ಸಂಗೀತ ಪ್ರತಿಷ್ಠಾನ ಸಂಸ್ಥೆಯ ಕಲಾ ಕೌಸ್ತುಭ ಹೀಗೆ ವಿವಿಧ ಪ್ರಶಸ್ತಿ ಸನ್ಮಾನಗಳಿಗೆ ಭಾಜನರಾಗಿದ್ದಾರೆ. <br /> <br /> ಉದ್ಘಾಟನೆ: ಕವಿ ಜಿ. ಎಸ್. ಶಿವರುದ್ರಪ್ಪ, ಅತಿಥಿಗಳು: ಡಾ. ನರಸಿಂಹಲು ವಡವಾಟಿ, ಪಂಡಿತ್ ಪರಮೇಶ್ವರ ಹೆಗಡೆ, ವೀಣಾ ರೈ, ಅಧ್ಯಕ್ಷತೆ: ಮಾಸ್ಟರ್ ಹಿರಣ್ಣಯ್ಯ. <br /> ಸ್ಥಳ: ಗಾಯನ ಸಮಾಜ, ಕೆ.ಆರ್. ರಸ್ತೆ. ಸಂಜೆ 4. <br /> <br /> <strong>ಮಾನಸಿ ರಾಗಮಾಲಿಕಾ</strong><br /> ಅನನ್ಯ: ಶನಿವಾರ ಗೀತ ಶಾಸ್ತ್ರ ಸಿಂಚನ ಸರಣಿಯಲ್ಲಿ `ರಾಗಮಾಲಿಕಾ~ ಸಂಯೋಜನೆ ಕುರಿತು ವಿದುಷಿ ಮಾನಸಿ ಪ್ರಸಾದ್ ಅವರಿಂದ ಸಂಗೀತ ಕಛೇರಿ. ನಳಿನಾ ಮೋಹನ್ (ವಯಲಿನ್), ಎನ್. ವಾಸುದೇವ (ಮೃದಂಗ) ಮತ್ತು ಭಾರದ್ವಾಜ್ ಸಾತವಳ್ಳಿ (ಮೋರ್ಚಿಂಗ್). ಸ್ಥಳ: ಅನನ್ಯ ಸಭಾಂಗಣ, 91/2, 4ನೇ ಮುಖ್ಯರಸ್ತೆ, ಮಲ್ಲೇಶ್ವರ. ಸಂಜೆ 6.30.</p>.<p><strong>ಕಲಾ ಪ್ರದರ್ಶನ<br /> </strong> ಸಾರಾ ಅರಕ್ಕಲ್ ಗ್ಯಾಲರಿ: ಕಲಾ ಗ್ಯಾಲರಿಯ 8ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಭಾನುವಾರ 45 ಸಮಕಾಲೀನ ಕಲಾವಿದರ ಕಲಾಕೃತಿಗಳ ಪ್ರದರ್ಶನ ಉದ್ಘಾಟನೆ. ನಂ. 156, 4ನೇ ಮುಖ್ಯರಸ್ತೆ, ಬಿಇಎಂಎಲ್ ಬಡಾವಣೆ, ಐಟಿಪಿಎಲ್ ರಸ್ತೆ. ಸಂಜೆ 6.30<br /> <br /> <strong>ಕಲಾ ದರ್ಶನ</strong><br /> ಖ್ಯಾತ ಕಲಾವಿದರಾದ ಕೈಲಾಸ್ ಅನ್ಯಾಲ್, ವಿಜಯಾ ರಾಜ್ ಬೋದಾನ್ಕರ್, ಸಂಗೀತ ಗದಾ ಮತ್ತು ಕಿಶೋರ್ ನಾದವ್ದೇಖರ್ ಅವರ ಅಪರೂಪದ ಕಲಾಕೃತಿಗಳು ಸೆ.15ರ ವರೆಗೆ ಪ್ರದರ್ಶನಗೊಳ್ಳಲಿವೆ. ಸ್ಥಳ: ಚಿತ್ರಕಲಾ ಪರಿಷತ್, ಬೆಳಿಗ್ಗೆ 10.30ರಿಂದ 7.30. <br /> <br /> <strong>ವಿಘ್ನರಾಜ ಸಂಗೀತ</strong><br /> ಸರಸ್ವತಿ ಗಾನ ಸಭಾ ಮತ್ತು ಶ್ರೀ ಗುರುವಾಯೂರಪ್ಪನ್ ಭಜನ್ ಸಮಾಜ ಟ್ರಸ್ಟ್: ಮಾಸಿಕ ಸಂಗೀತ ಕಛೇರಿ ಅಂಗವಾಗಿ ಭಾನುವಾರ ವಿಘ್ನರಾಜ, ಬಿ.ಕೆ. ರಘು ಮತ್ತು ಅರ್ಜುನ ಕುಮಾರ್ ಅವರಿಂದ ಸಂಗೀತ ಕಛೇರಿ.<br /> <br /> 1979ರಲ್ಲಿ ಹುಟ್ಟಿದ ವಿಘ್ನರಾಜ ಮೊದಲಿಗೆ ತಮ್ಮ ತಂದೆ ಸೂರ್ಯನಾರಾಯಣ ಭಟ್ ಅವರ ಬಳಿ ಸಂಗೀತದ ಓನಾಮ ಕಲಿತರು. ತಂದೆಯ ಶಿಷ್ಯ ಸುಬ್ರಹ್ಮಣ್ಯ ಭಟ್ ಅವರ ಬಳಿ ಸಂಗೀತಾಭ್ಯಾಸ ಮುಂದುವರಿಸಿದರು. 16 ವರ್ಷದವರಿದ್ದಾಗ ತಂದೆಯ ಜೊತೆ ಸಂಗೀತ ಕಛೇರಿ ನೀಡಲು ಆರಂಭಿಸಿದರು. <br /> <br /> ಮಧುರ ಕಂಠದಿಂದ ಖ್ಯಾತರಾಗಿರುವ ವಿಘ್ನರಾಜ ಕೊಳಲು ವಾದಕರೂ ಹೌದು. ದೇಶ, ವಿದೇಶದ ಹಲವು ವೇದಿಕೆಗಳಲ್ಲಿ ಸಂಗೀತ ಮತ್ತು ಕೊಳಲು ಕಛೇರಿ ನೀಡಿದ್ದಾರೆ. ಪ್ರಸ್ತುತ ಕ್ವಾಲಾಲಂಪುರದ `ಟೆಂಪಲ್ ಆಫ್ ಫೈನ್ ಆರ್ಟ್ಸ್ ಇಂಟರ್ನ್ಯಾಷನಲ್~ನಲ್ಲಿ ವಾದ್ಯ ವಿಭಾಗದ ಉಸ್ತುವಾರಿ ಹೊತ್ತಿದ್ದಾರೆ.<br /> <br /> ಸ್ಥಳ: ಉನ್ನತಿ ಕೇಂದ್ರ, ನಂ 1, ಗಣೇಶ ಟೆಂಪಲ್ ರಸ್ತೆ, ಎನ್ಜಿಇಎಫ್ ಬಡಾವಣೆ, ಸದಾನಂದ ನಗರ. ಬೆಳಿಗ್ಗೆ 10.30.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>