<p>ಕರ್ನಾಟಕದಲ್ಲಿ ಹರಿಕಥಾ ಪ್ರಕಾರಕ್ಕೆ ತನ್ನದೇ ಆದ ಸುದೀರ್ಘ ಇತಿಹಾಸವಿದೆ. ಹರಿಕಥೆಯ ಮಹಿಮೆ, ಹಿರಿಮೆ, ಲೋಕಪ್ರಿಯತೆ ಎಲ್ಲರಿಗೂ ತಿಳಿದೇ ಇದೆ. ಅವಗಣನೆಗೆ ಗುರಿಯಾಗುತ್ತಿರುವ ಪ್ರಕಾರಗಳಲ್ಲಿ ಹರಿಕಥೆಯೂ ಒಂದು. <br /> <br /> ಹರಿಕಥೆ ಎಂದರೆ ಸಾವಿರಾರು ಜನರು ಸೇರುತ್ತಿದ್ದ ಕಾಲವೊಂದಿತ್ತು, ಈಗಲೂ ಜನ ಸೇರುತ್ತಾರಾದರೂ ಆಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಲ್ಲ. ಈ ಪ್ರಾಚೀನ ಕಲೆಯನ್ನು ಉಳಿಸಿ, ಬೆಳೆಸಿ, ಮುಂದಿನ ಜನಾಂಗಕ್ಕೆ ಪರಿಚಯಿಸುವ ಉದ್ದೇಶದಿಂದ ನಗರದ ಷಡ್ಜ ಕಲಾಕೇಂದ್ರ, ಕರ್ನಾಟಕ ಕೀರ್ತನಾ ಕಲಾ ಪರಿಷತ್ತಿನ ಸಹಯೋಗದೊಂದಿಗೆ ಇದೇ ಜನವರಿ 8ರಂದು ಭಾನುವಾರ ಒಂದು ದಿನದ ವಿಚಾರ ಸಂಕಿರಣವನ್ನು ಆಯೋಜಿಸಿದೆ.<br /> <br /> ಬೆಳಗ್ಗೆ 9.30ಕ್ಕೆ ಆರಂಭವಾಗಿ ಸಂಜೆ 6.30ರವರೆಗೆ ಈ ವಿಚಾರ ಸಂಕಿರಣ ನಡೆಯಲಿದೆ. ಹಿರಿಯ ಸಂತ ಹಾಗೂ ಖ್ಯಾತ ಕೀರ್ತನಕಾರರಾದ ಭದ್ರಗಿರಿ ಅಚ್ಯುತದಾಸರ ಮಾರ್ಗದರ್ಶನದಲ್ಲಿ ನಡೆಯಲಿರುವ ಈ ವಿಚಾರ ಸಂಕಿರಣದಲ್ಲಿ ನಾಡಿನ ನಾನಾ ಮೂಲೆಗಳಿಂದ ಖ್ಯಾತ ಕೀರ್ತನಕಾರರು ಒಂದೆಡೆ ಸೇರಲಿದ್ದಾರೆ ಎಂದು ಕೀರ್ತನಾಚಾರ್ಯ ಲಕ್ಷ್ಮಣ್ದಾಸ್ ವೇಲಣಕರ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ 080-23341886 ಅಥವಾ 8861102949 ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕರ್ನಾಟಕದಲ್ಲಿ ಹರಿಕಥಾ ಪ್ರಕಾರಕ್ಕೆ ತನ್ನದೇ ಆದ ಸುದೀರ್ಘ ಇತಿಹಾಸವಿದೆ. ಹರಿಕಥೆಯ ಮಹಿಮೆ, ಹಿರಿಮೆ, ಲೋಕಪ್ರಿಯತೆ ಎಲ್ಲರಿಗೂ ತಿಳಿದೇ ಇದೆ. ಅವಗಣನೆಗೆ ಗುರಿಯಾಗುತ್ತಿರುವ ಪ್ರಕಾರಗಳಲ್ಲಿ ಹರಿಕಥೆಯೂ ಒಂದು. <br /> <br /> ಹರಿಕಥೆ ಎಂದರೆ ಸಾವಿರಾರು ಜನರು ಸೇರುತ್ತಿದ್ದ ಕಾಲವೊಂದಿತ್ತು, ಈಗಲೂ ಜನ ಸೇರುತ್ತಾರಾದರೂ ಆಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಲ್ಲ. ಈ ಪ್ರಾಚೀನ ಕಲೆಯನ್ನು ಉಳಿಸಿ, ಬೆಳೆಸಿ, ಮುಂದಿನ ಜನಾಂಗಕ್ಕೆ ಪರಿಚಯಿಸುವ ಉದ್ದೇಶದಿಂದ ನಗರದ ಷಡ್ಜ ಕಲಾಕೇಂದ್ರ, ಕರ್ನಾಟಕ ಕೀರ್ತನಾ ಕಲಾ ಪರಿಷತ್ತಿನ ಸಹಯೋಗದೊಂದಿಗೆ ಇದೇ ಜನವರಿ 8ರಂದು ಭಾನುವಾರ ಒಂದು ದಿನದ ವಿಚಾರ ಸಂಕಿರಣವನ್ನು ಆಯೋಜಿಸಿದೆ.<br /> <br /> ಬೆಳಗ್ಗೆ 9.30ಕ್ಕೆ ಆರಂಭವಾಗಿ ಸಂಜೆ 6.30ರವರೆಗೆ ಈ ವಿಚಾರ ಸಂಕಿರಣ ನಡೆಯಲಿದೆ. ಹಿರಿಯ ಸಂತ ಹಾಗೂ ಖ್ಯಾತ ಕೀರ್ತನಕಾರರಾದ ಭದ್ರಗಿರಿ ಅಚ್ಯುತದಾಸರ ಮಾರ್ಗದರ್ಶನದಲ್ಲಿ ನಡೆಯಲಿರುವ ಈ ವಿಚಾರ ಸಂಕಿರಣದಲ್ಲಿ ನಾಡಿನ ನಾನಾ ಮೂಲೆಗಳಿಂದ ಖ್ಯಾತ ಕೀರ್ತನಕಾರರು ಒಂದೆಡೆ ಸೇರಲಿದ್ದಾರೆ ಎಂದು ಕೀರ್ತನಾಚಾರ್ಯ ಲಕ್ಷ್ಮಣ್ದಾಸ್ ವೇಲಣಕರ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ 080-23341886 ಅಥವಾ 8861102949 ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>