<p><strong>ಅಫಜಲಪುರ: </strong>ವಿಶ್ವ ಬ್ಯಾಂಕ್ ನೆರವಿನ ಜಲ ನಿರ್ಮಲ ಯೋಜನೆ ಅಡಿ ₹ 1.30 ಕೋಟಿ ಅನುದಾನದಲ್ಲಿ ಭೀಮಾ ನದಿಯಿಂದ ತಾಲ್ಲೂಕಿನ ಬಂದರವಾಡ ಗ್ರಾಮಕ್ಕೆ ಶುದ್ಧ ಮತ್ತು ಶಾಶ್ವತ ಕುಡಿಯುವ ನೀರಿಗಾಗಿ 2008ರಲ್ಲಿ ಕಾಮಗಾರಿ ಆರಂಭವಾದರೂ ಇದುವರೆಗೂ ಕೆಲಸ ಮುಗಿಯದೆ ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.<br /> <br /> ಭೀಮಾನದಿಯಿಂದ ಪೈಪ್ಲೈನ್ ಮುಖಾಂತರ ಗ್ರಾಮದ ಹೊರವಲಯದ ನೀರಿನ ಟ್ಯಾಂಕ್ ಮತ್ತು ಶುದ್ಧಿಕರಣ ಘಟಕಕ್ಕೆ ನೀರು ಪೂರೈಸಿ, ಆ ಮೂಲಕ ಗ್ರಾಮಕ್ಕೆ ಕುಡಿಯಲು ನೀರು ಸರಬರಾಜು ಮಾಡಲು ಸರ್ಕಾರ ಜಲ ನಿರ್ಮಲ ಯೋಜನೆ ಅಡಿ ಉದ್ದೇಶಿಸಿತ್ತು.<br /> <br /> ಈ ಯೋಜನೆಯಡಿ ₹ 1.30 ಕೋಟಿ ಮತ್ತು ಭಾರತ ನಿರ್ಮಾಣದಲ್ಲಿ ₹ 10.50 ಲಕ್ಷ ನೀಡಲಾಗಿತ್ತು. 8 ವರ್ಷ ಕಳೆಯುತ್ತಾ ಬಂದರೂ ನದಿಯ ನೀರು ಟ್ಯಾಂಕ್ಗೆ ಹರಿದುಬಂದಿಲ್ಲ ಎಂದು ಹೇಳಲಾಗಿದೆ.<br /> <br /> ಸರ್ಕಾರ ಸಾಕಷ್ಟು ಹಣ ನೀಡಿದರೂ, ಅಪೂರ್ಣ ಕಾಮಗಾರಿ ಮತ್ತು ಕಳಪೆ ಕಾಮಗಾರಿಯಿಂದಾಗಿ ಸಂಪೂರ್ಣ ಕುಡಿಯುವ ನೀರಿನ ಯೋಜನೆ ವಿಫಲವಾಗಿದೆ. ಸರ್ಕಾರ ಈ ಬಗ್ಗೆ ಪರಿಶೀಲನೆ ಮಾಡಿ ಗ್ರಾಮದ ಜನರಿಗೆ ನೀರು ಕುಡಿಸುವ ವ್ಯವಸ್ಥೆ ಮಾಡಬೇಕೆಂದು ಬಂದರವಾಡ ಗ್ರಾಮಸ್ಥರು ಒತ್ತಾಯಿಸಿದ್ದಾರೆ.<br /> <br /> ಈ ಯೋಜನೆ ಇಷ್ಟು ವರ್ಷ ಕಳೆದರೂ ಏಕೆ ಪೂರ್ಣವಾಗಿಲ್ಲ ಎಂಬುದರ ಬಗ್ಗೆ ಇದುವರೆಗೂ ವಿಶ್ವ ಬ್ಯಾಂಕ್ ಅಧಿಕಾರಿಗಳಾಗಲಿ, ಜಲ ನಿರ್ಮಲ ಇಲಾಖೆ ಅಧಿಕಾರಿಗಳಾಗಲಿ ವಿಚಾರಣೆ ಮಾಡದೆ ಇರುವುದು ದುರಂತವಾಗಿದೆ.<br /> <br /> ಕುಡಿಯುವ ನೀರಿನ ಯೋಜನೆಗಳನ್ನು ನೋಡಿಕೊಳ್ಳುತ್ತಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪ ವಿಭಾಗ ಎಇಇ ಅವರು ಇದುವರೆಗೂ ಇದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.<br /> <br /> ಇಲ್ಲಿಯ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಸಾಮಾನ್ಯಸಭೆಗಳಲ್ಲಿ ಈ ಭಾಗದಿಂದ ಆಯ್ಕೆಯಾಗಿರುವ ಸದಸ್ಯರು ಧ್ವನಿ ಎತ್ತದೆ ಇರುವುದು ನೋಡಿದರೆ ಯಾರಿಗೂ ಯೋಜನೆ ಬಗ್ಗೆ ಆಸಕ್ತಿ ಇದ್ದಂತಿಲ್ಲ ಎಂದು ಗ್ರಾಮಸ್ಥರಾದ ಗುಂಡು ನಾಗಠಾಣ, ರಾಜು ಭಜಂತ್ರಿ ಆರೋಪಿಸಿದ್ದಾರೆ.<br /> <em><strong>-ಶಿವಾನಂದ ಹಸರಗುಂಡಗಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಫಜಲಪುರ: </strong>ವಿಶ್ವ ಬ್ಯಾಂಕ್ ನೆರವಿನ ಜಲ ನಿರ್ಮಲ ಯೋಜನೆ ಅಡಿ ₹ 1.30 ಕೋಟಿ ಅನುದಾನದಲ್ಲಿ ಭೀಮಾ ನದಿಯಿಂದ ತಾಲ್ಲೂಕಿನ ಬಂದರವಾಡ ಗ್ರಾಮಕ್ಕೆ ಶುದ್ಧ ಮತ್ತು ಶಾಶ್ವತ ಕುಡಿಯುವ ನೀರಿಗಾಗಿ 2008ರಲ್ಲಿ ಕಾಮಗಾರಿ ಆರಂಭವಾದರೂ ಇದುವರೆಗೂ ಕೆಲಸ ಮುಗಿಯದೆ ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.<br /> <br /> ಭೀಮಾನದಿಯಿಂದ ಪೈಪ್ಲೈನ್ ಮುಖಾಂತರ ಗ್ರಾಮದ ಹೊರವಲಯದ ನೀರಿನ ಟ್ಯಾಂಕ್ ಮತ್ತು ಶುದ್ಧಿಕರಣ ಘಟಕಕ್ಕೆ ನೀರು ಪೂರೈಸಿ, ಆ ಮೂಲಕ ಗ್ರಾಮಕ್ಕೆ ಕುಡಿಯಲು ನೀರು ಸರಬರಾಜು ಮಾಡಲು ಸರ್ಕಾರ ಜಲ ನಿರ್ಮಲ ಯೋಜನೆ ಅಡಿ ಉದ್ದೇಶಿಸಿತ್ತು.<br /> <br /> ಈ ಯೋಜನೆಯಡಿ ₹ 1.30 ಕೋಟಿ ಮತ್ತು ಭಾರತ ನಿರ್ಮಾಣದಲ್ಲಿ ₹ 10.50 ಲಕ್ಷ ನೀಡಲಾಗಿತ್ತು. 8 ವರ್ಷ ಕಳೆಯುತ್ತಾ ಬಂದರೂ ನದಿಯ ನೀರು ಟ್ಯಾಂಕ್ಗೆ ಹರಿದುಬಂದಿಲ್ಲ ಎಂದು ಹೇಳಲಾಗಿದೆ.<br /> <br /> ಸರ್ಕಾರ ಸಾಕಷ್ಟು ಹಣ ನೀಡಿದರೂ, ಅಪೂರ್ಣ ಕಾಮಗಾರಿ ಮತ್ತು ಕಳಪೆ ಕಾಮಗಾರಿಯಿಂದಾಗಿ ಸಂಪೂರ್ಣ ಕುಡಿಯುವ ನೀರಿನ ಯೋಜನೆ ವಿಫಲವಾಗಿದೆ. ಸರ್ಕಾರ ಈ ಬಗ್ಗೆ ಪರಿಶೀಲನೆ ಮಾಡಿ ಗ್ರಾಮದ ಜನರಿಗೆ ನೀರು ಕುಡಿಸುವ ವ್ಯವಸ್ಥೆ ಮಾಡಬೇಕೆಂದು ಬಂದರವಾಡ ಗ್ರಾಮಸ್ಥರು ಒತ್ತಾಯಿಸಿದ್ದಾರೆ.<br /> <br /> ಈ ಯೋಜನೆ ಇಷ್ಟು ವರ್ಷ ಕಳೆದರೂ ಏಕೆ ಪೂರ್ಣವಾಗಿಲ್ಲ ಎಂಬುದರ ಬಗ್ಗೆ ಇದುವರೆಗೂ ವಿಶ್ವ ಬ್ಯಾಂಕ್ ಅಧಿಕಾರಿಗಳಾಗಲಿ, ಜಲ ನಿರ್ಮಲ ಇಲಾಖೆ ಅಧಿಕಾರಿಗಳಾಗಲಿ ವಿಚಾರಣೆ ಮಾಡದೆ ಇರುವುದು ದುರಂತವಾಗಿದೆ.<br /> <br /> ಕುಡಿಯುವ ನೀರಿನ ಯೋಜನೆಗಳನ್ನು ನೋಡಿಕೊಳ್ಳುತ್ತಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪ ವಿಭಾಗ ಎಇಇ ಅವರು ಇದುವರೆಗೂ ಇದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.<br /> <br /> ಇಲ್ಲಿಯ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಸಾಮಾನ್ಯಸಭೆಗಳಲ್ಲಿ ಈ ಭಾಗದಿಂದ ಆಯ್ಕೆಯಾಗಿರುವ ಸದಸ್ಯರು ಧ್ವನಿ ಎತ್ತದೆ ಇರುವುದು ನೋಡಿದರೆ ಯಾರಿಗೂ ಯೋಜನೆ ಬಗ್ಗೆ ಆಸಕ್ತಿ ಇದ್ದಂತಿಲ್ಲ ಎಂದು ಗ್ರಾಮಸ್ಥರಾದ ಗುಂಡು ನಾಗಠಾಣ, ರಾಜು ಭಜಂತ್ರಿ ಆರೋಪಿಸಿದ್ದಾರೆ.<br /> <em><strong>-ಶಿವಾನಂದ ಹಸರಗುಂಡಗಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>