ಬೆಂಗಳೂರು: ಹಿರಿಯ ನಾಗರಿಕರ ವಸತಿಗೃಹವಾದ ‘ವಿಎಲ್ಎನ್ ಪ್ರಬುದ್ಧಾಲಯ’ ನೀಡುವ 2017ನೇ ಸಾಲಿನ ‘ವಿಎಲ್ಎನ್. ನಿರ್ವಾಣ್–ಹಿರಿಯ ನಾಗರಿಕ ಆಜೀವ ಸಾಧನಾ’ ಪ್ರಶಸ್ತಿಗೆ ಐವರನ್ನು ಆಯ್ಕೆ ಮಾಡಲಾಗಿದೆ.
ಟಿ.ಎಂ.ರಾಮಾಚಾರ್, ಲಕ್ಷ್ಮಿ, ಡಾ.ಎನ್.ಬಾಲಸುಬ್ರಮಣಿಯನ್, ಫಿಲಾರ್ ಭವಾನಿಶಂಕರ್, ಎಸ್.ಕೆ.ಅಶ್ವತ್ಥನಾರಾಯಣ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಶಸ್ತಿಯು ಸ್ಮರಣಿಕೆ ಹಾಗೂ ₹ 10 ಸಾವಿರ ನಗದು ಬಹುಮಾನವನ್ನು ಒಳಗೊಂಡಿದ್ದು, ನಿಸರ್ಗ ಬಡಾವಣೆಯಲ್ಲಿರುವ ‘ವಿಎಲ್ಎನ್ ಪ್ರಬುದ್ಧಾಲಯ’ದಲ್ಲಿ ಜೂನ್ 4ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.