ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅಥವಾ ಮುಂದಿನ ಚುನಾವಣೆಯ ನೇತೃತ್ವ ವಹಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೌಜನ್ಯಕ್ಕಾದರೂ ಶಿವಕುಮಾರ್ ಭೇಟಿಯಾಗಿಲ್ಲ. ಅವರು ಕೋಪಿಸಿಕೊಂಡಿರುವುದಕ್ಕೆ ಇದು ನಿದರ್ಶನ ಎಂದು ಕಾಂಗ್ರೆಸ್ವಲಯದಲ್ಲಿ ಹೇಳಲಾಗುತ್ತಿದೆ.