ಇಲ್ಲಿ ತರಬೇತಿ ಪಡೆದ ದಕ್ಷಿಣ ಕನ್ನಡದ ಶಾಶ್ವತ್ ಬಂಡಾರಿ ಸಿಇಟಿಯಲ್ಲಿ 37ನೇರ್ಯಾಂಕ್ ಗಳಿಸಿದ್ದಾರೆ. ದ್ವಿತೀಯ ಪಿಯು ಪರೀಕ್ಷೆಯಲ್ಲಿ 600ಕ್ಕೆ 582 ಅಂಕಗಳನ್ನು ಪಡೆದಿದ್ದು, ರಸಾಯನ ವಿಜ್ಞಾನ, ಗಣಿತ ಹಾಗೂ ಭಾಷಾ ವಿಷಯದಲ್ಲಿ ಶೇ 100ರಷ್ಟು ಅಂಕಗಳಿಸಿದ್ದಾರೆ. ಜೆಇಇ ಮುಖ್ಯ ಪರೀಕ್ಷೆಯಲ್ಲಿ 185 ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ. ಇದೇ ಸಂಸ್ಥೆಯ ಎಚ್. ಡಿ. ಬಸವರಾಜ್, ಅಂಜಿನಪ್ಪ, ಜಿ. ಆರ್. ಬಾಲಾಜಿ ಮೊದಲ 300 ರ್ಯಾಂಕ್ ಒಳಗೆ ಸ್ಥಾನ ಪಡೆದಿದ್ದಾರೆ.