ತಾಲ್ಲೂಕಿನ ಬಹಳಷ್ಟು ಕೆರೆಕಟ್ಟೆಗಳ ಸುತ್ತಲೂ ಸಸಿಗಳನ್ನು ಹಾಕಲಾಗಿದೆ. ರಸ್ತೆಬದಿ ನೆಟ್ಟಿರುವ ಗಿಡಗಳು ಮೇಲೆದ್ದಿವೆ. ಬೇಸಿಗೆಯಲ್ಲಿ ಟ್ಯಾಂಕರ್ ಮೂಲಕ ನೀರು ಹಾಕಿ ಬೆಳೆಸಿರುವುದನ್ನು ಮೆಲ್ಲಹಳ್ಳಿ ಗೇಟ್ ಮತ್ತು ಗೌಡಹಳ್ಳಿ ಸುತ್ತಮುತ್ತ ಕಾಣಬಹುದು. ಗುಂಬಳ್ಳಿ ಮತ್ತು ದೇವರಹಳ್ಳಿ ರಸ್ತೆಗಳಲ್ಲಿ ಮೇಲೆದ್ದ ಸಸಿಗಳು ಇತ್ತೀಚೆಗೆ ಸುರಿದ ಮಳೆಗೆ ಚಿಗು ರಿವೆ. ಕಾಡಂಚಿನ ಕೆರೆಗಳ ಬಳಿ ಕರಡಿ, ಕಾಟಿ, ಚಿರತೆಗಳು ಬರುವಷ್ಟು ಹಸಿರು ಪರಿಸರ ಸೃಷ್ಟಿಸಲಾಗಿದೆ ಎನ್ನುತ್ತಾರೆ ಸಾಮಾಜಿಕ ಅರಣ್ಯ ಇಲಾಖೆಯ ಅನಂತರಾಮು.