ಹುಣಸಗಿ (ಯಾದಗಿರಿ ಜಿಲ್ಲೆ): ‘ಜಲಾಶಯಗಳ ಕಾಲುವೆ ನೀರಿನ ಸದ್ಬಳಕೆಗಾಗಿ ಹಾಗೂ ಪ್ರಾಯೋಗಿಕವಾಗಿ ಹುಣಸಗಿ ವಿತರಣಾ ಕಾಲುವೆಗೆ (ಎಚ್ಬಿಸಿ) ವಾಲ್ವ್ ಮೆಟ್ರಿಕ್ ಗೇಟ್ಗಳನ್ನು ಅಳವಡಿಸಲಾಗಿದೆ. ದೇಶದಲ್ಲಿಯೇ ಇದು ಮೊದಲ ಪ್ರಯತ್ನವಾಗಿದ್ದು, ಇದರಿಂದ ನಿಗದಿತ ಪ್ರಮಾಣದ ನೀರನ್ನು ರೈತರಿಗೆ ಹಂಚಿಕೆ ಮಾಡಲು ಸಹಕಾರಿಯಾಗಲಿದೆ’ ಎಂದು ಕೇಂದ್ರ ಜಲಸಂಪನ್ಮೂಲ ರಾಜ್ಯ ಸಚಿವ ಸಂಜೀವಕುಮಾರ ಬಲ್ಯಾನ್ ತಿಳಿಸಿದರು.