ಲಖನೌ: ಬಾಬರಿ ಮಸೀದಿ ಧ್ವಂಸದ ಒಳಸಂಚಿಗೆ ಸಂಬಂಧಿಸಿದ ಪ್ರಕರಣದಲ್ಲಿ ಬಿಜೆಪಿಯ ಹಿರಿಯ ಮುಖಂಡರು, ಸಂಸದರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಷಿ, ಕೇಂದ್ರ ಸಚಿವೆ ಉಮಾಭಾರತಿ ಅವರಿಗೆ ಲಖನೌದ ವಿಶೇಷ ಸಿಬಿಐ ನ್ಯಾಯಾಲಯ ಖುದ್ದು ಹಾಜರಾತಿಯಿಂದ ವಿನಾಯ್ತಿ ನೀಡಿದೆ.
ಮಸೀದಿ ಧ್ವಂಸವಾಗಿ 25 ವರ್ಷಗಳ ಬಳಿಕ ಒಂಬತ್ತು ಜನರ ವಿರುದ್ಧ ನ್ಯಾಯಾಲಯ ದೋಷಾರೋಪ ನಿಗದಿ ಮಾಡಿತ್ತು.
ವಿಎಚ್ ಪಿ ಮುಖಂಡ ವಿಷ್ಣುಹರಿ ದಾಲ್ಮಿಯಾ, ಬಿಜೆಪಿಯ ವಿನಯ್ ಕಟಿಯಾರ್ ಮತ್ತು ಸಾದ್ವಿ ರೀತಾಂಬರ ಅವರಿಗೆ ಖುದ್ದು ಹಾಜರಾಗುವಂತೆ ನ್ಯಾಯಾಲಯ ಸೂಚಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 30 ರಂದು ಸಿಬಿಐ ನ್ಯಾಯಾಲಯ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಷಿ ಸೇರಿದಂತೆ 6 ಜನರಿಗೆ ಜಾಮೀನು ನೀಡಿತ್ತು.