ಕಾಳಗಾಪುರದ ಅಶ್ವಿನಿ ಅವರ ತಂದೆ–ತಾಯಿ ಇಬ್ಬರೂ ಅನಾರೋಗ್ಯಕ್ಕೆ ತುತ್ತಾಗಿದ್ದರು. ಹೀಗಾಗಿ ಅನಾಥವಾದ ಅಶ್ವಿನಿ ಸಂಕಷ್ಟಕ್ಕೆ ಸಿಲುಕಿದ್ದರು. ಏ.29 ರಂದು ಗ್ರಾಮದಲ್ಲಿ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವದಲ್ಲಿ ಪಾಲ್ಗೊಳ್ಳಲು ಶಾಸಕ ಪ್ರಭು ಚವಾಣ್ ಬಂದಿದ್ದರು. ಈ ವೇಳೆ ಗ್ರಾಮಸ್ಥರು ಯುವತಿಯ ಪರಿಸ್ಥಿತಿಯನ್ನು ಗಮನಕ್ಕೆ ತಂದರು. ಕೂಡಲೇ ‘ಅಶ್ವಿನಿ ಈಗ ನನ್ನ ಮಗಳು. ಈಕೆಯನ್ನು ದತ್ತು ಪಡೆದಿದ್ದು, ಮದುವೆಯ ಜವಾಬ್ದಾರಿ ನನ್ನದೇ. ಈಕೆಗೆ ಮನೆಯನ್ನೂ ಕಟ್ಟಿಸಿಕೊಡುತ್ತೇನೆ’ ಎಂದವರು, ಅಶ್ವಿನಿಯನ್ನು ವೇದಿಕೆಗೆ ಕರೆದು ಗ್ರಾಮಸ್ಥರಿಗೆ ಭರವಸೆ ನೀಡಿದ್ದರು.