ತಂದೆ ಮೃತಪಟ್ಟ ಬಳಿಕ ಅಮ್ಮ ಕೂಲಿ ಮಾಡಿ ನಮ್ಮನ್ನೆಲ್ಲ ಓದಿಸಬೇಕಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದರೂ ಮುಂದಿನ ಓದಿಗೆ ಆರ್ಥಿಕ ಅಡಚಣೆಯಾಯಿತು. ಈ ಹಂತದಲ್ಲೇ ಪ್ರಜಾವಾಣಿ ನೆರವಿಗೆ ಬಂತು. ಹಾಸ್ಟೆಲ್ ಶುಲ್ಕ ಕಟ್ಟಿದೆ. ಪ್ರಸ್ತುತ ಧಾರವಾಡದಲ್ಲಿ ಪಿಯು ವಿಜ್ಞಾನ ವಿಷಯದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ.
ಎಂ.ರಾಜಪ್ಪ,ಹಲವಾಗಲು, ಹರಪನಹಳ್ಳಿ