ಸಿದ್ದರಾಮಯ್ಯ ವಿರುದ್ಧ ಯಾವುದೇ ವೈಯಕ್ತಿಕ ಟೀಕೆಗಳನ್ನು ಮಾಡದ ವಿಶ್ವನಾಥ್, ‘ರಾಜಕಾರಣ, ಪಕ್ಷ, ಪರಿಸ್ಥಿತಿ, ಸನ್ನಿವೇಶ ಇವುಗಳನ್ನು ಪ್ರಶ್ನೆ ಮಾಡುತ್ತಾ ಹೋದರೆ ಲಾಭವಿಲ್ಲ. ಈಗ ಹೊಸ ಮನೆಗೆ ಪದಾರ್ಪಣೆ ಮಾಡಿದ್ದೇನೆ. 40 ವರ್ಷ ಕಾಂಗ್ರೆಸ್ನಲ್ಲಿ ಕಲಿತ ವಿದ್ಯೆಯನ್ನು ಜೆಡಿಎಸ್ನಲ್ಲಿ ಬಳಸುತ್ತೇನೆ. ಅಲ್ಲಿ ಪಕ್ಷಕ್ಕೆ ಎಷ್ಟು ನಿಷ್ಠನಾಗಿದ್ದೆನೋ ಇಲ್ಲೂ ಅಷ್ಟೇ ನಿಷ್ಠನಾಗಿ ದುಡಿಯುತ್ತೇನೆ’ ಎಂದು ಹೇಳಿದರು.