ಚೀರಾಟ ಕೇಳಿ ತಮ್ಮ ಕೋಣೆಗಳಿಂದ ಹೊರ ಬಂದ ಮಹಿಳೆಯರು, ಕೂಡಲೇ ಆರ್ಐಸಿಎಂ ನಿರ್ದೇಶಕ ಬಿ.ವಸಂತ್ ನಾಯಕ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಅವರು ಪೊಲೀಸ್ ನಿಯಂತ್ರಣ ಕೊಠಡಿಗೆ (100) ಸುದ್ದಿ ಮುಟ್ಟಿಸಿದ್ದರು. ಈ ಹಂತದಲ್ಲಿ ಪವನ್, ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದ. ಆಗ ಒಗ್ಗಟ್ಟು ಪ್ರದರ್ಶಿಸಿದ ಮಹಿಳೆಯರು, ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ, ಕೋಣೆಯೊಂದರಲ್ಲಿ ಕೂಡಿ ಹಾಕಿದ್ದರು.