ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಾಶ್‌, ಜೂಡಿ ಮುಡಿಗೆ ಕಿರೀಟ

Last Updated 9 ಜುಲೈ 2017, 19:48 IST
ಅಕ್ಷರ ಗಾತ್ರ

ಬೆಂಗಳೂರು: ಅಮೋಘ ಸಾಮರ್ಥ್ಯ ತೋರಿದ ಆಕಾಶ್‌ ಅಶೋಕ್‌ ಕುಮಾರ್‌ ಮತ್ತು ಜೂಡಿ ಆಲ್ಬನ್‌ ಅವರು ಎಆರ್‌ಸಿ ಕರ್ನಾಟಕ ರಾಜ್ಯ ಟೆನ್‌ಪಿನ್‌ ಬೌಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಅಮೀಬಾ ಸೆಂಟರ್‌ನಲ್ಲಿ ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಆಕಾಶ್‌ ಅವರು 69 ಪಿನ್‌ಗಳ ಅಂತರದಿಂದ ಮಾಜಿ ರಾಷ್ಟ್ರೀಯ ಚಾಂಪಿಯನ್‌ ವಿಜಯ್‌ ಪಂಜಾಬಿ ಅವರ ಸವಾಲು ಮೀರಿದರು. ಮೊದಲ ಗೇಮ್‌ನಲ್ಲಿ 208 ಸ್ಕೋರ್‌ ಕಲೆಹಾಕಿದ ಆಕಾಶ್‌ ಎರಡನೇ ಗೇಮ್‌ ನಲ್ಲಿ 235 ಸ್ಕೋರ್‌ ಸಂಗ್ರಹಿಸಿ ಮಿಂಚಿದರು.

ಮಹಿಳೆಯರ  ವಿಭಾಗದಲ್ಲಿ  ಜೂಡಿ  10 ಪಿನ್‌ಗಳ ಅಂತರ ದಿಂದ ಚೇತನಾ ರಾಜಶೇಖರ ಅವರನ್ನು ಸೋಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT