ಬೆಂಗಳೂರು: ‘ಹೆದ್ದಾರಿ ಬದಿಯ ಮದ್ಯದಂಗಡಿಗಳ ಡಿನೋಟಿಫಿಕೇಷನ್ ಸಂಬಂಧ ಪಂಜಾಬ್, ಹಿಮಾಚಲ ಪ್ರದೇಶ ಸರ್ಕಾರಗಳು ಅನುಸರಿಸಿರುವ ಮಾದರಿಯನ್ನೇ ರಾಜ್ಯವೂ ಅನುಸರಿಸಬೇಕು. ನಮ್ಮಲ್ಲೂ ಅಬಕಾರಿ ನಿಯಮಕ್ಕೆ ತಿದ್ದುಪಡಿ ತರಬೇಕು’ ಎಂದು ಆಗ್ರಹಿಸಿ ರಾಜ್ಯ ಮದ್ಯ ಮಾರಾಟಗಾರರ ಸಂಘದ ಒಕ್ಕೂಟ ಸದಸ್ಯರು ಮೌನ ಪ್ರತಿಭಟನೆ ನಡೆಸಿದರು.