ಕಾನ್ಪುರದಲ್ಲಿ ವ್ಯಾಪಾರಸ್ಥನಾಗಿರುವ ಯುವಕ ಮತ್ತು ಸರ್ಕಾರಿ ಉದ್ಯೋಗಿ ಯುವತಿಯೊಂದಿಗೆ ವಿವಾಹ ನಿಶ್ಚಯವಾಗಿತ್ತು. ಇಬ್ಬರೂ ತಮ್ಮ ಮದುವೆಯ ವಿಷಯವನ್ನು ಚರ್ಚಿಸಲು ಇತ್ತೀಚೆಗೆ ದೇವಾಲಯದ ಬಳಿ ಭೇಟಿಯಾಗಿದ್ದಾರೆ. ಮದುವೆಗೆ ತಗಲುವ ಖರ್ಚು ವೆಚ್ಚಗಳ ಕುರಿತು ಮಾತುಕತೆ ಆರಂಭವಾಗಿ ಅದು ದೇಶದ ಆರ್ಥಿಕ ಸ್ಥಿತಿಯತ್ತ ತಿರುಗಿ ಪ್ರಧಾನಿ ಮೋದಿ ಹೆಸರು ಪ್ರಸ್ತಾಪಕ್ಕೆ ಕಾರಣವಾಗಿದೆ.