ಖಾದಿ ಕೇವಲ ಬಟ್ಟೆಯಲ್ಲ, ಅದೊಂದು ಆಂದೋಲನ. ಖಾದಿ ಅಭಿಯಾನದಂತೆ ಸಾಗಬೇಕಿದೆ. ಜನರಲ್ಲಿ ಖಾದಿ ಕುರಿತು ಆಸಕ್ತಿ ಹೆಚ್ಚಿದ್ದು, ಖಾದಿ ಬಟ್ಟೆಗಳ ಮಾರಾಟ ಹೆಚ್ಚಿರುವುದರಿಂದ ಬಡ ಜನತೆಗೆ ಉದ್ಯೋಗ ನೀಡಿದಂತಾಗಿದೆ. ಖಾದಿ ಉದ್ಯಮದಲ್ಲಿ ತೊಡಗಿರುವವರ ಮನೆಮನೆಗಳಲ್ಲಿ ಈ ದೀಪಾವಳಿ ಬೆಳಕು ನೀಡುವಂತೆ ಆಗಬೇಕು ಎಂದು ಹೇಳಿದರು.