ಶಿವರಾಯ ಕೃಷಿಕರು. ತಮ್ಮ ಕಾಯಕದ ನಡುವೆಯೇ ಊರಿನ ಪ್ರಮುಖ ಭಾಗವನ್ನು ಸ್ವಚ್ಛಗೊಳಿಸುತ್ತಿದ್ದರು. ಎರಡು ವರ್ಷಗಳ ಹಿಂದೆ ಕಾಲುಜಾರಿ ಬಿದ್ದು ಸೊಂಟದ ಭಾಗ ಮುರಿದಿದೆ. ಈಗ ಸ್ವತಂತ್ರವಾಗಿ ನಡೆಯಲು ಆಗುವುದಿಲ್ಲ. ಆದರೂ, ತಮ್ಮ ಸೇವಾ ಕಾಯಕವನ್ನು ಮಾತ್ರ ನಿಲ್ಲಿಸಿಲ್ಲ. ಒಂದು ಕೈಯಲ್ಲಿ ಪೊರಕೆ, ಇನ್ನೊಂದು ಕೈಯಲ್ಲಿ ನಡೆಯಲು ಸಹಾಯಕವಾದ ‘ವಾಕರ್’ ಹಿಡಿದು ಬಜಾರ್ ಹಾಗೂ ಚವಡಿ ಸುತ್ತಲೂ ಕಸ ಗುಡಿಸುತ್ತಾರೆ. ನಂತರ ಸಂಗ್ರಹವಾದ ಕಸವನ್ನು ತೆಗೆದುಕೊಂಡು ಹೋಗಿ ತಿಪ್ಪೆಗೆ ಹಾಕುತ್ತಾರೆ.