ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗಳ ಸ್ವಚ್ಛತೆಗಾಗಿ ‘ಕ್ಲೀನಥಾನ್‌‘

Last Updated 2 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಯುನೈಟೆಡ್‌ ಬೆಂಗಳೂರು ಹಾಗೂ ಲೆಟ್ಸ್‌ ಬಿ ಚೇಂಜ್‌ ಸಂಸ್ಥೆಗಳ ಸಹಯೋಗದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ‘ಸ್ವಚ್ಛ ಬೆಂಗಳೂರು’ ಘೋಷವಾಕ್ಯದಡಿ ಸೋಮವಾರ ‘ಮೆಗಾ ಕ್ಲೀನಥಾನ್‌’ ನಡೆಯಿತು.

ಕ್ಲೀನಥಾನ್‌ನ ಪ್ರಯುಕ್ತ ನಗರದ 72 ವಾರ್ಡ್‌ಗಳ 9 ಕೆರೆಗಳ ಪ್ರದೇಶ ಹಾಗೂ ಗಲೀಜಾದ ಗೋಡೆಗಳನ್ನು ಸ್ವಚ್ಛಗೊಳಿಸಲಾಯಿತು. ಈ ಕಾರ್ಯದಲ್ಲಿ  ಸಾವಿರಾರು  ಸ್ವಯಂಸೇವಕರು ಕೈ ಜೋಡಿಸಿದರು. ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಸಂಸದ ರಾಜೀವ ಚಂದ್ರಶೇಖರ್‌, ಅನಿರುದ್ಧ ದತ್ತ, ನಟಿ ಮಾಳವಿಕಾ ಭಾಗವಹಿಸಿದರು.

ರಾಜೀವ್‌ ಚಂದ್ರಶೇಖರ್ ಮಾತನಾಡಿ, ‘ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮ ಕರ್ತವ್ಯ. ಕ್ಲಿನಥಾನ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದು ಖುಷಿ ತಂದಿದೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT