ಅಂಗನವಾಡಿಗೆ ನೂತನ ಕಟ್ಟಡ ನಿರ್ಮಿಸಿ ಕೊಡಬೇಕೆಂದು ಪೋಷಕರು ಐದಾರು ವರ್ಷದಿಂದ ಒತ್ತಾಯ ಮಾಡುತ್ತ ಬಂದಿದ್ದರೂ ಪ್ರಯೋಜನವಾಗಿಲ್ಲ. ಸ್ವಲ್ಪ ಮಳೆ ಬಂದರೂ ಕೇಂದ್ರದ ಒಳಗೆ ನೀರು ನುಗ್ಗುತ್ತದೆ. ಸ್ವಲ್ಪ ಪ್ರಮಾಣದಲ್ಲಿ ನೀರಿದ್ದರೆ, ಅಂಗನವಾಡಿ ಸಿಬ್ಬಂದಿ ಮೊಗೆದು ಹಾಕುತ್ತಾರೆ. ಆದರೆ, ಮಂಗಳವಾರ ರಾತ್ರಿ ಬಿದ್ದ ಮಳೆಗೆ ಒಂದು ಅಡಿಯಷ್ಟು ನೀರು ನಿಂತಿದೆ. ಅಲ್ಲದೆ, ಕಟ್ಟಡದ ಗೋಡೆ ಮಳೆಗೆ ನೆನೆದಿರುವ ಕಾರಣ ಕುಸಿದು ಬೀಳಬಹುದು ಎಂಬ ಭಯ ಸಿಬ್ಬಂದಿಯನ್ನು ಕಾಡುತ್ತಿದೆ ಎಂದು ವಂದೇಮಾತರಂ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಎಲ್.ಗಿರಿಧರ್ ತಿಳಿಸಿದ್ದಾರೆ.