ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಯೂಟ ನೀಡಲು ಕಾರ್ಯಕರ್ತೆಯರಿಂದ ಹರಸಾಹಸ

Last Updated 5 ಅಕ್ಟೋಬರ್ 2017, 10:15 IST
ಅಕ್ಷರ ಗಾತ್ರ

ಕುಣಿಗಲ್: ಮಾತೃಪೂರ್ಣ ಯೋಜನೆಯ ಪೌಷ್ಟಿಕ ಬಿಸಿಯೂಟಕ್ಕೆ ಅಂಗನವಾಡಿ ಕೇಂದ್ರಗಳಿಗೆ ಬರಲು ಬಾಣಂತಿಯರು ಮತ್ತು ಗರ್ಭಿಣಿಯರು ಸಂಕೋಚ ಪಡುತ್ತಿದ್ದು, ಅಂಗನವಾಡಿ ಕಾರ್ಯಕರ್ತೆಯರು ಮನವೋಲಿಸಿ ಬಿಸಿಯೂಟ ನೀಡಲು ಹರಸಾಹಸ ಪಡುತ್ತಿದ್ದಾರೆ.

ಪಟ್ಟಣದ ಮತ್ತು ಕೆಲವು ಗ್ರಾಮಾಂತರ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದಾಗ ಬಾಂಣತಿಯರು ಕನಿಷ್ಠ 45 ದಿನ ಮನೆಯಿಂದ ಹೊರಬರಲಾಗದ ಸ್ಥಿತಿ ಇದೆ. ಈ ಕಾರಣ ಬಾಣಂತಿಯರ ಮನೆಗೆ ಆಹಾರ ಕಳುಹಿಸಬೇಕಾಗಿದೆ. ಇನ್ನೂ ಗರ್ಭಿಣಿಯರಿಗೆ ದಿನ ಹತ್ತಿರವಾಗುತ್ತಿದ್ದಂತೆ ಬರಲಾಗದ ಕಾರಣ ಅವರಿಗೂ ಸಹ ಮನೆಗೆ ಕಳುಹಿಸಬೇಕಾಗಿದೆ ಎಂದು ಕಾರ್ಯಕರ್ತೆಯರು ಹೇಳುತ್ತಾರೆ.

’ಕೆಲ ಮಹಿಳೆಯರು ಹಿಂದಿನ ಪದ್ಧತಿಯಂತೆ ಆಹಾರ ಸಾಮಾಗ್ರಿ ನೀಡಿ ನಾವೇ ತಯಾರು ಮಾಡಿಕೊಳ್ಳುತ್ತೇವೆ ಎಂದು ಮನವಿ ಮಾಡುತ್ತಿದ್ದಾರೆ. ಮಲ್ಲಿಪಾಳ್ಯದಲ್ಲಿ ಫಲಾನುಭವಿಗಳು ಆಸಕ್ತಿ ತೋರದಿದ್ದರೂ ಕಾರ್ಯಕರ್ತೆಯರು ಅಹಾರ ಸಿದ್ಧಪಡಿಸಿ ಬಾಣಂತಿಯರ ಮನೆಗೆ ತಲುಪಿಸಲು ವ್ಯವಸ್ಥೆ ಮಾಡುತ್ತಿರುವುದು ಕಂಡು ಬರುತ್ತಿದೆ. ಇನ್ನೂ ಕೆಲವರು ಬರಲು ಜಾತಿ ಅಡ್ಡವಾಗಿದೆ’ ಎಂಬ ದಲಿತ ನಾರಾಯಣ್ ಅಭಿಪ್ರಾಯಪಟ್ಟರು.

ಬೋರಲಿಂಗನಪಾಳ್ಯ, ಬಿಳಿ ದೇವಾಲಯ ಮತ್ತು ಪಟ್ಟಣದ ಹೌಸಿಂಗ್ ಬೋರ್ಡ್‌ ಕಾಲೊನಿಯಲ್ಲಿ ಶೇ 50 ಭಾಗ ಯಶಸ್ವಿಯಾಗಿದೆ. ಕ್ರಮೇಣ ಸುಧಾರಣೆ ಕಂಡು ಬರುವ ವಿಶ್ವಾಸವನ್ನು ಕಾರ್ಯಕರ್ತೆಯರು ವ್ಯಕ್ತಪಡಿಸಿದ್ದಾರೆ.

’ಮಕ್ಕಳಿಗೆ ನೀಡುವ ಮೊಟ್ಟೆಯ ಹಣವನ್ನು ಮೂರು ತಿಂಗಳಾದರೂ ಕೊಟ್ಟಿಲ್ಲ. ಈಗ ಮಾತೃಪೂರ್ಣ ಯೋಜನೆಯ ತರಕಾರಿ ಮತ್ತು ಮೊಟ್ಟೆಗೂ ಹಣ ಹಾಕಬೇಕಾದ ಪರಿಸ್ಥಿತಿ ಎದುರಾಗಿದೆ’ ಎಂದು ಸಿಐಟಿಯೂ ಅಧ್ಯಕ್ಷ ಗುಲ್ಜಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT