ವಕೀಲ ಮ್ಯಾಥ್ಯೂ ಜೆ. ನೆಡುಂಪಾರ ಅವರ ಮನವಿಯನ್ನು ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನೇತೃತ್ವದ ತ್ರಿಸದಸ್ಯ ಪೀಠವು ಪರಿಶೀಲನೆ ನಡೆಸಿತು. ‘ವಕಾಲತ್ನಾಮೆಯಲ್ಲಿ ಸೂಚಿಸಲಾಗಿರುವ ವಕೀಲರಷ್ಟೇ ತುರ್ತು ವಿಚಾರಣೆಗೆ ಮನವಿ ಮಾಡಬಹುದು. ಈ ಅರ್ಜಿಯ ವಕಾಲತ್ನಾಮೆಯಲ್ಲಿ ನಿಮ್ಮ ಹೆಸರು ಇಲ್ಲದ ಕಾರಣ ಮನವಿಯನ್ನು ತಿರಸ್ಕರಿಸುತ್ತಿದ್ದೇವೆ’ ಎಂದು ಪೀಠ ಹೇಳಿತು.