ಬೆಂಗಳೂರು: ‘ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಅವರು ಜತೆಗೂಡಿ ಸ್ಥಾಪಿಸಿದ ಮೈಸೂರು ಬ್ಯಾಂಕ್ ಪ್ರತ್ಯೇಕ ಅಸ್ತಿತ್ವ ಉಳಿಸಿಕೊಳ್ಳಬೇಕಿತ್ತು’ ಎಂದು ಕವಿ ದೊಡ್ಡರಂಗೇಗೌಡ ಅವರು ಅಭಿಪ್ರಾಯಪಟ್ಟರು.
ಮೈಸೂರು ಬ್ಯಾಂಕಿನ ಪಿಂಚಣಿದಾರರ ಸಮುದಾಯವು ನಗರದಲ್ಲಿ ಆಯೋಜಿಸಿದ್ದ ಮೈಸೂರು ಬ್ಯಾಂಕ್ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ಆರ್ಥಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಆಲೋಚನೆಗಳು ಏನೇ ಇರಬಹುದು. ಆದರೆ, ವೈಯಕ್ತಿಕವಾಗಿ ನನಗೆ ಮೈಸೂರು ಬ್ಯಾಂಕ್ ಎಂಬುದೇ ಇಷ್ಟ. ಆ ಹೆಸರು ಕೇಳಿದಾಕ್ಷಣ ಕನ್ನಡತನದ ಸಂಚಲನ ಮೂಡುತ್ತದೆ’ ಎಂದು ಹೇಳಿದರು.
**
ರಾಜಕೀಯವಾಗಿ ಹಾಗೂ ಆಡಳಿತಾತ್ಮಕವಾಗಿ ಎಲ್ಲೆಡೆ ನುಂಗಾಸುರರೇ ಇದ್ದಾರೆ. ಅಧಿಕಾರಕ್ಕೆ ಬರುವಾಗ ಪುಟ್ಟ ಇಲಿ. ಅಧಿಕಾರಕ್ಕೇರಿದ ಬಳಿಕ ಹೆಗ್ಗಣ. ಆಮೇಲೆ ತಿಮಿಂಗಲ. ಇದು ನುಂಗಾಸುರರ ಕಾರ್ಯದ ವೈಖರಿ - ದೊಡ್ಡರಂಗೇಗೌಡ, ಕವಿ