ಬಂಟ್ವಾಳ: ತಾಲ್ಲೂಕಿನ ಕೊಡ್ಮಾಣ್ ಸಮೀಪದ ನಡುಬೈಲು ಎಂಬಲ್ಲಿ ಗದ್ದೆ ಬದಿ ಇರುವ ಗುಡ್ಡವೊಂದರಲ್ಲಿ ಉರುಳಿಗೆ ಸಿಲುಕಿ ಚಿರತೆಯೊಂದು ಮೃತಪಟ್ಟಿದೆ. ಮುಳ್ಳುಹಂದಿ ಮತ್ತು ಕಾಡು ಹಂದಿ ಹಿಡಿಯಲು ಸ್ಥಳೀಯರು ಗುಡ್ಡ ಪ್ರದೇಶದಲ್ಲಿ ಉರುಳು ಇಟ್ಟಿದ್ದು, ಶುಕ್ರವಾರ ತಡರಾತ್ರಿ ಆಹಾರ ಹುಡುಕಿಕೊಂಡು ಬಂದಿದ್ದ ಚಿರತೆ, ಈ ಉರುಳಿಗೆ ಸಿಲುಕಿ ಸಾವನ್ನಪ್ಪಿದೆ.