ಒಟ್ಟು ಮೂರು ಕಾರ್ಖಾನೆ: ದಕ್ಷಿಣ ಭಾರತದಲ್ಲಿ ಕೇಂದ್ರ ಸರ್ಕಾರದ ಒಟ್ಟು ಮೂರು ಮುದ್ರಣಾಯಲಗಳಿವೆ. ಮೈಸೂರು, ಕೊರಟ್ಟಿ (ಕೇರಳ), ಕೊಯಮತ್ತೂರಿನಲ್ಲಿ (ತಮಿಳುನಾಡು) ಮುದ್ರಣಾಯಲಗಳಿದ್ದು, ಸೆ. 20ರಂದು ಇವನ್ನು ಮುಚ್ಚುವ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ ಎನ್ನಲಾಗಿದೆ. ಈ ಎಲ್ಲ ಮುದ್ರಣಾಲಯಗಳ ಕಾರ್ಮಿಕರನ್ನು ಉತ್ತರ ಭಾರತದ ಮುದ್ರಣಾಲಯಗಳಿಗೆ ವರ್ಗಾವಣೆ ಮಾಡುವ ಭೀತಿ ಇದೆ ಎಂದು ಕಾರ್ಖಾನೆಯ ನೌಕರರೂ ಆದ, ಕೇಂದ್ರ ಸರ್ಕಾರದ ಮುದ್ರಣಾಲಯಗಳ ನೌಕರರ ಸಂಘದ ಅಧ್ಯಕ್ಷ ಎಚ್.ಶಂಕರಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.