ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದಿಂದ ಸಂಸ್ಕಾರೋತ್ಸವ ಆಚರಣೆ

Last Updated 9 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಖಿಲ ಹವ್ಯಕ ಮಹಾಸಭಾವು ನಗರದಲ್ಲಿ ಆಯೋಜಿಸಿದ್ದ ‘ಸಂಸ್ಕಾರೋತ್ಸವ’ವನ್ನು ಸಮುದಾಯದ ಸದಸ್ಯರು ಸಂಭ್ರಮದಿಂದ ಆಚರಿಸಿದರು.

ಬೆಳಿಗ್ಗೆ ವಿನಾಯಕನ ಪೂಜೆ ನೆರವೇರಿಸಿ ಮತ್ತು ಅಮೃತಬಳ್ಳಿ ನೆಡುವ ಮೂಲಕ ಯಕ್ಷಗಾನ ಕಲಾವಿದ ಹೊಸ್ತೋಟ ಮಂಜುನಾಥ ಭಾಗವತರು ಉತ್ಸವಕ್ಕೆ ಚಾಲನೆ ನೀಡಿದರು.

‘ಉತ್ಸವಗಳು ಉತ್ಸಾಹದ ದ್ಯೋತಕವಾಗಿವೆ. ಅವುಗಳಿಂದ ಸಂಸ್ಕೃತಿಯ ಸಂಸ್ಕಾರಗಳು ನೆನಪಾಗುತ್ತವೆ. ಹವ್ಯಕ ಸಮುದಾಯದಲ್ಲಿನ ಸತ್‌ ಸಂಸ್ಕಾರಗಳನ್ನು ಸಮಾಜಕ್ಕೆ ಪರಿಚಯಿಸಲು ಇಂತಹ ಉತ್ಸವಗಳು ಅಗತ್ಯ’ ಎಂದು ಹೊಸ್ತೋಟ ಮಂಜುನಾಥ ಹೇಳಿದರು.

ಮಹಾಸಭಾದ ಅಧ್ಯಕ್ಷ ಡಾ. ಗಿರಿಧರ್‌ ಕಜೆ, ‘ಹವ್ಯಕರು ಹುಟ್ಟಿನಿಂದಲೇ ಸಂಸ್ಕಾರಗಳನ್ನು ಪಡೆದುಕೊಂಡು ಬರುತ್ತಾರೆ. ಅವುಗಳನ್ನು ಬೆಳೆಸಲು, ಜಾಗೃತಗೊಳಿಸಲು ಉತ್ಸವ ಆಯೋಜಿಸಲಾಗಿದೆ. ಮನುಜನಲ್ಲಿ ಸಂಸ್ಕಾರದ ಬೇರುಗಳು ಗಟ್ಟಿಯಾಗಿದ್ದಾಗಲೇ, ಜೀವನವೆಂಬ ಮರ ಸಮೃದ್ಧವಾಗಿರುತ್ತದೆ’ ಎಂದರು.

ವಿದ್ವಾಂಸ ಡಾ. ಕಬ್ಬಿನಾಲೆ ವಸಂತ ಭಾರಧ್ವಾಜ್, ಜಗದೀಶ ಶರ್ಮ, ಡಾ. ಹಿತ್ಲಳ್ಳಿ ಸೂರ್ಯನಾರಾಯಣ್ ಭಟ್, ಕೂಟೇಲು ರಾಮಕೃಷ್ಣ ಭಟ್ ಅವರು ಹವ್ಯಕರ ಆಚಾರ-ವಿಚಾರ, ಸಂಸ್ಕೃತಿ, ಸಂಪ್ರದಾಯಗಳ ಕುರಿತು ಉಪನ್ಯಾಸಗಳನ್ನು ನೀಡಿದರು.

ಕಲಾವಿದ ರಾಘವೇಂದ್ರ ಹೆಗಡೆ ಬಿಡಿಸಿದ ಮರಳು ಚಿತ್ರಗಳು, ಜಯಲಕ್ಷ್ಮಿ ಭಟ್ ಮತ್ತು ತಂಡದ ಸಂಗೀತ ಕಾರ್ಯಕ್ರಮ, ಮೋಹನ್‌ ಭಾಸ್ಕರ ಹೆಗಡೆ ತಂಡ ಪ್ರಸ್ತುತಪಡಿಸಿದ ಕರ್ಮಬಂಧ ತಾಳಮದ್ದಲೆ ಸಭಿಕರ ಮನಗೆದ್ದವು. ಹವ್ಯಕರ ಸಾಂಪ್ರದಾಯಿಕ ಅಡುಗೆಯ ತಿನಿಸುಗಳ ರುಚಿಯನ್ನು ಜನರು ಸವಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT