ಅವರನ್ನು ಉದ್ದೇಶಿಸಿ ಮಾತನಾಡಿದ ರೈ, ‘ಅಭಿಪ್ರಾಯವನ್ನು ಖಂಡಿಸಬಹುದು, ಆದರೆ ಕ್ರೌರ್ಯ ಒಳ್ಳೆಯದಲ್ಲ. ಇನ್ನೊಬ್ಬರ ಬಾಯಿ ಮುಚ್ಚಿಸುವ ಕೆಲಸ ಮಾಡಬಾರದು. ಯಾವ ಮನುಷ್ಯ ಪ್ರಕೃತಿ ಹಾಗೂ ಜನ ವಿರೋಧಿ ಕೆಲಸ ಮಾಡುವುದಿಲ್ಲವೋ, ಪ್ರಾಮಾಣಿಕತೆಯಿಂದ ಇರುತ್ತಾನೋ ಅಂತಹ ವ್ಯಕ್ತಿ ಯಾರಿಗೂ ಅಂಜದೆ ನೆಮ್ಮದಿಯಿಂದ ಬದುಕುವ ವಾತಾವರಣವನ್ನು ಸೃಷ್ಟಿಸಿಕೊಡಬೇಕು. ನಾವು ನೆಮ್ಮದಿಯಿಂದ ಇರಬೇಕು’ ಎಂದರು.