ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ಸತ್ಯವ್ವ, ಪತಿ ಬಾಲಪ್ಪ ಅವರೊಂದಿಗೆ ಉತ್ತೂರಿನಲ್ಲಿ ವಾಸವಿದ್ದರು. ರಾತ್ರಿ ಊಟ ಮಾಡಿದ ನಂತರ ದಿಢೀರ್ ಅಸ್ವಸ್ಥರಾಗಿದ್ದ ಅವರನ್ನು ಮುಧೋಳದ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಅವರು ಅಲ್ಲಿ ಮೃತಪಟ್ಟಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಲು ರೈಲಿನಲ್ಲಿ ಬೆಂಗಳೂರಿಗೆ ಹೊರಟಿದ್ದ ತಿಮ್ಮಾಪುರ, ತಾಯಿಯ ಸಾವಿನ ಸುದ್ದಿ ತಿಳಿದು ರಾಣೆಬೆನ್ನೂರಿನಿಂದ ವಾಪಸ್ ಬಂದರು.