ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಥನ ಕಲೆ, ಕೌಶಲದಿಂದ ನೆನಪಿನಲ್ಲುಳಿಯುವ ಲೇಖಕ’

Last Updated 12 ಅಕ್ಟೋಬರ್ 2017, 9:11 IST
ಅಕ್ಷರ ಗಾತ್ರ

ಧಾರವಾಡ: ‘ಅಪರೂಪದ ಕಥೆಗಳ ರಚನೆಯಿಂದಾಗಿ ರಾಮಚಂದ್ರ ಕೊಟ್ಟಲಗಿ ಓದುಗರ ಮನಸ್ಸಿನಲ್ಲಿ ಸದಾಕಾಲ ಉಳಿಯುತ್ತಾರೆ' ಎಂದು ಹರ್ಷ ಡಂಬಳ ಅಭಿಪ್ರಾಯಪಟ್ಟರು.

ಡಾ.ವರದರಾಜ ಹುಯಿಲಗೋಳ ಪುಣ್ಯಸ್ಮರಣೆ ಪ್ರಯುಕ್ತ ಸಾಧನಕೇರಿ ಚೈತ್ರ ಸಭಾಂಗಣದಲ್ಲಿ ಅನ್ವೇಷಣ ಕೂಟ ಏರ್ಪಡಿಸಿದ್ದ ‘ರಾಮಚಂದ್ರ ಕೊಟ್ಟಲಗಿಯವರ ಕಾದಂಬರಿಗಳು’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

’ತಮ್ಮ ಕಾದಂಬರಿಗಳಲ್ಲಿ ಉತ್ತರ ಕರ್ನಾಟಕದ ಪ್ರಾದೇಶಿಕ ಭಾಷೆಯನ್ನು ಬಳಸುವ ಮೂಲಕ ಸಾಹಿತ್ಯ ಲೋಕಕ್ಕೆ ಅನುಪಮ ಕೊಡುಗೆ ನೀಡಿದ್ದಾರೆ’ ಎಂದರು.

ಪ್ರೊ. ದುಷ್ಯಂತ ನಾಡಗೌಡ ಮಾತನಾಡಿ, ‘ಹುಸಿ ಮೌಲ್ಯದ ಹವಸಲುಗಟ್ಟಿದ ಇಂದಿನ ದಿನಮಾನದಲ್ಲಿ ಬದುಕಿನ ಅನುಭವದ ಕ್ರೋಢೀಕರಣದ ಇಂಥ ಕೃತಿಗಳ ಓದುವಿಕೆ ನಮ್ಮ ಕಣ್ತೆರೆಸುವ ಕೆಲಸಮಾಡುತ್ತವೆ’ ಎಂದರು.

ನರಸಿಂಹ ಪರಾಂಜಪೆ, ವೆಂಕಟೇಶ ದೇಸಾಯಿ, ಹ.ವೆಂ.ಕಾಖಂಡಿಕಿ ಡಾ.ರಮಾಕಾಂತ ಜೋಶಿ, ಆನಂದ ಝುಂಜರವಾಡ, ಡಾ.ಬಾಳಣ್ಣ ಶೀಗಿಹಳ್ಳಿ, ಡಾ. ಆರ್.ಬಿ.ಚಿಲುಮಿ, ಮನೋಜ ಪಾಟೀಲ, ಹ.ಶಿ.ಭೈರನಟ್ಟಿ, ಮತ್ತಿತರರು ಇದ್ದರು.  ನಂತರ ನಡೆದ ಭಕ್ತಿ ಸಂಗೀತ ಕಾರ್ಯಕ್ರಮದಲ್ಲಿ ಗಾಯಕಿ ಪ್ರತಿಮಾ ಕಲಕೇರಿ ದಾಸರ ಪದಗಳನ್ನು ಪ್ರಸ್ತುತಪಡಿಸಿದರು. ಗಜಾನನ ಹೆಗಡೆ ತಬಲಾ ಸಾಥ್ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT