ನಮ್ಮ ದೇಶದ ಮಕ್ಕಳು ತಮ್ಮ ನೆಲದ್ದಲ್ಲದ ಭಾಷೆ ಕಲಿಯುವುದರಿಂದ ಅವರು ಸ್ಥಳೀಯ ಸಂಸ್ಕೃತಿಯ ತಿಳಿವಳಿಕೆಯಿಂದ ವಂಚಿತರಾಗಬೇಕಾಗುತ್ತದೆ. ನಮ್ಮ ಭಾಷೆಗಳನ್ನು ನಾವೇ ಕಲಿತು ಉಳಿಸಿ-ಬೆಳೆಸಬೇಕು. ಈ ಕೆಲಸವನ್ನು ವಿದೇಶಿಯರು ಮಾಡಲಾರರು. ಸ್ಥಳೀಯ ಭಾಷೆಗಳಿಗೆ ಪ್ರೋತ್ಸಾಹ ಮತ್ತು ಪ್ರಾಮುಖ್ಯ ನೀಡುವ ದಿಶೆಯಲ್ಲಿ ಭಾರತೀಯ ಭಾಷೆಗಳ ಮೇಲೆ ಆಲದ ಮರದಂತೆ ವ್ಯಾಪಿಸಿರುವ, ಗುಲಾಮಿ ಸಂಸ್ಕೃತಿಯ ಪ್ರತೀಕವಾಗಿರುವ ಇಂಗ್ಲಿಷ್ ಅನ್ನು ಕೈಬಿಟ್ಟು ಸಂಪೂರ್ಣ ಸ್ವದೇಶಿ ಭಾಷೆಗಳಿಂದ ಕೂಡಿದ ಭಾಷಾಸೂತ್ರವೊಂದನ್ನು
ಜಾರಿ ಮಾಡಬೇಕು. ಆ ಮೂಲಕ ಜಪಾನ್, ಚೀನಾದಂತಹ ದೇಶಗಳಲ್ಲಿರುವ ಭಾಷಾ ವಿವೇಕವನ್ನು ನಾವೂ ತೋರಿಸಬೇಕು.
-ಹಜರತಅಲಿ ಇ. ದೇಗಿನಾಳ, ವಿಜಯಪುರ