ಅ.14ರಂದು ಗ್ರಾಮದ ಚಂದ್ರಕಟ್ಟೆ ಮೇಲೆ ನಿಂತು ಭಕ್ತರಿಂದ ಕಾಯಿ ಕರ್ಪೂರ ದೀಡ್ ನಮಸ್ಕಾರ ನಡೆಯುವುದು. ಮಧ್ಯಾಹ್ನ 1ಕ್ಕೆ ಮೈಲಾರಲಿಂಗೇಶ್ವರ ಹಳಿಗೇರಾ ದೇವಸ್ಥಾನಕ್ಕೆ ಮೆರವಣಿಗೆ ತಲುಪಲಿದೆ. ನಂತರ ಗುಂಡು ಎತ್ತುವ, ಕೈಕುಸ್ತಿ ಸೇರಿದಂತೆ ವಿವಿಧ ಗ್ರಾಮೀಣ ಕ್ರೀಡಾ ಸ್ಪರ್ಧೆಗಳು ನಡೆಯುತ್ತವೆ. ಅ.15ರಂದು ಕಬಡ್ಡಿ ಪಂದ್ಯಾವಳಿ ಜರುಗುವುದು.