‘ಅನ್ಯಮಾರ್ಗಗಳ ಮೂಲಕ ಹೆಚ್ಚಿನ ಅಂಕಗಳನ್ನು ಪಡೆಯುವುದಕ್ಕಿಂತ ನ್ಯಾಯ ಮಾರ್ಗಗಳ ಮೂಲಕ ಪಡೆಯುವ ಜ್ಞಾನವು ಮನುಷ್ಯನನ್ನು ಪರಿಪೂರ್ಣ ವ್ಯಕ್ತಿಯನ್ನಾಗಿ ರೂಪಿಸುತ್ತದೆ. ಪೋಷಕರು ಹಾಗೂ ಸಮಾಜದ ಒತ್ತಡದ ನಡುವೆ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನು ಗಳಿಸುವತ್ತ ಗಮನ ಹರಿಸುತ್ತಿದ್ದಾರೆ. ಅನೇಕ ವಿದ್ಯಾರ್ಥಿಗಳು ವಾಮಮಾರ್ಗಗಳನ್ನು ಅನುಸರಿಸಲು ಯೋಚಿಸುತ್ತಾರೆ. ಇದರಿಂದ ಗಳಿಸುವ ಅಂಕಗಳಿಗಿಂತ ಒಂದು ವರ್ಷ ಅದೇ ವಿಷಯವನ್ನು ಕಲಿತು ಜ್ಞಾನ ವೃದ್ಧಿಸಿಕೊಳ್ಳುವುದು ಉತ್ತಮ’ ಎಂದು ತಿಳಿಸಿದರು.